ADVERTISEMENT

ನಮ್ಮ ನೋವು ಅವರಿಗೂ ಆಗಬೇಕು: ಮೃತನ ತಾಯಿ ತುಳಸಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 19:47 IST
Last Updated 2 ಜನವರಿ 2026, 19:47 IST
ಬಳ್ಳಾರಿಯ ವಿಮ್ಸ್‌ನ ಶವಾಗಾರದ ಎದುರು ಮೃತ ರಾಜಶೇಖರ ಕುಟುಂಬಸ್ಥರ ಆಕ್ರಂದನ 
ಬಳ್ಳಾರಿಯ ವಿಮ್ಸ್‌ನ ಶವಾಗಾರದ ಎದುರು ಮೃತ ರಾಜಶೇಖರ ಕುಟುಂಬಸ್ಥರ ಆಕ್ರಂದನ    

ಬಳ್ಳಾರಿ: ‘ನಮ್ಮ ನೋವು ಅವರಿಗೂ ಆಗಬೇಕು. ನಮಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕು’ ಎಂದು ಮೃತನ ತಾಯಿ ತುಳಸಿ ಹೇಳಿದರು. 

‘ನನ್ನ ಮಗ ಮತ್ತು ನಾನು ನಮ್ಮ ಪಾಡಿಗೆ ಇದ್ದೆವು. ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದೆವು. ರಾಜಶೇಖರ ಶಾಸಕ ಭರತ್‌ ರೆಡ್ಡಿ ಹಿಂದೆ ಓಡಾಡಿಕೊಂಡಿದ್ದ. ನಮ್ಮ ಮನೆಯವರು ಬಿಜೆಪಿಯಲ್ಲಿ ಇದ್ದರು. ಈಗ ನೋಡಿದರೆ ಹೀಗೆ ಆಗಿದೆ. ಮಗನ ಕಳೆದುಕೊಂಡು ತೀವ್ರ ನೋವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT