ADVERTISEMENT

ಪ್ರಜಾವಾಣಿ ವರದಿ ಫಲಶ್ರುತಿಕುಡಿಯುವ ನೀರಿಗೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 11:21 IST
Last Updated 24 ಆಗಸ್ಟ್ 2021, 11:21 IST
ಹೊಸಪೇಟೆಯ ಆದರ್ಶ ವಿದ್ಯಾಲಯಕ್ಕೆ ಮಂಗಳವಾರ ಕುಡಿಯುವ ನೀರಿನ ಟ್ಯಾಂಕರ್‌ ವ್ಯವಸ್ಥೆ ಮಾಡಲಾಗಿದೆ 
ಹೊಸಪೇಟೆಯ ಆದರ್ಶ ವಿದ್ಯಾಲಯಕ್ಕೆ ಮಂಗಳವಾರ ಕುಡಿಯುವ ನೀರಿನ ಟ್ಯಾಂಕರ್‌ ವ್ಯವಸ್ಥೆ ಮಾಡಲಾಗಿದೆ    

ಹೊಸಪೇಟೆ (ವಿಜಯನಗರ): ನಗರ ಹೊರವಲಯದ ಜಂಬುನಾಥ ರಸ್ತೆಯಲ್ಲಿನ ಆದರ್ಶ ವಿದ್ಯಾಲಯಕ್ಕೆ ಮಂಗಳವಾರ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಶಾಲೆಗೆ ಕುಡಿಯುವ ನೀರಿನ ಟ್ಯಾಂಕರ್‌ ಕಳುಹಿಸಲಾಗಿದ್ದು, ಕುಡಿಯಲು ಹಾಗೂ ಬಳಕೆಗೆ ನೀರು ಉಪಯೋಗಿಸಬಹುದಾಗಿದೆ. ಆದರ್ಶ ಶಾಲೆಯಲ್ಲಿನ ಕೊಳವೆಬಾವಿ ಹದಗೆಟ್ಟಿದ್ದರಿಂದ ಕುಡಿಯುವ ನೀರು, ಶೌಚಾಲಯಕ್ಕೆ ನೀರಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದರು. ಸೋಮವಾರ ಶಾಲೆ ಆರಂಭಗೊಂಡ ಮೊದಲ ದಿನವೇ ಸಮಸ್ಯೆ ಉಂಟಾಗಿತ್ತು. ಈ ಕುರಿತು ಮಂಗಳವಾರ ‘ಆದರ್ಶ ಶಾಲೆ; ನೀರಿಗೆ ಸಮಸ್ಯೆ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT