ADVERTISEMENT

ಹರಪನಹಳ್ಳಿ | ಭಾರಿ ಮಳೆ: ವಾಹನ ಸಂಚಾರ ಸ್ಥಗಿತ, ಮೂರು ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 5:05 IST
Last Updated 21 ಆಗಸ್ಟ್ 2025, 5:05 IST
ಹರಪನಹಳ್ಳಿ ತಾಲ್ಲೂಕು ಇಟ್ಟಿಗುಡಿ ಗ್ರಾಮದಲ್ಲಿ ಶಾಂತಮ್ಮ ಅವರ ಮನೆ ಬಿದ್ದಿರುವುದು.
ಹರಪನಹಳ್ಳಿ ತಾಲ್ಲೂಕು ಇಟ್ಟಿಗುಡಿ ಗ್ರಾಮದಲ್ಲಿ ಶಾಂತಮ್ಮ ಅವರ ಮನೆ ಬಿದ್ದಿರುವುದು.   

ಹರಪನಹಳ್ಳಿ: ತಾಲ್ಲೂಕಿನ ಹಲುವಾಗಲು-ಗರ್ಭಗುಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬುಧವಾರ ಸಂಪೂರ್ಣ ಜಲಾವೃತಗೊಂಡು, ವಾಹನ ಸಂಚಾರ ಸ್ಥಗಿತಗೊಂಡಿದೆ.

ಹಲುವಾಗಲಿನಿಂದ ಗರ್ಭಗುಡಿಗೆ ಹೋಗುವ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ವಾಹನಗಳು ಕಣವಿ ಮಾರ್ಗದ ಮೂಲಕ ಸಂಚಾರ ಮಾಡುತ್ತಿವೆ. ಗರ್ಭಗುಡಿ ಗ್ರಾಮದ ಗಂಗಮ್ಮ ದೇವಿ ಗುಡಿಯವರೆಗೂ ನೀರು ಬಂದಿದೆ. ತಾಲ್ಲೂಕಿನಲ್ಲಿ ಸುರಿದ ಮಳೆಯಿಂದ ಇಟ್ಟಿಗುಡಿ ಶಾಂತಮ್ಮ, ದೇವರ ತಿಮ್ಲಾಪುರದಲ್ಲಿ ಯಂಕಪ್ಪ, ತಾವರಗುಂದಿಯಲ್ಲಿ ರೇಣುಕಮ್ಮ ಅವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಹರಪನಹಳ್ಳಿ ತಾಲ್ಲೂಕು ಹಲುವಾಗಲು-ಗರ್ಭಗುಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದ್ದು ಬೈಕ್ ಗಳನ್ನು ತೊಳೆಯುತ್ತಿರುವ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT