ADVERTISEMENT

ಬಳ್ಳಾರಿ: ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕು ಪತ್ರಕ್ಕೆ ಆಗ್ರಹ

22 ರಂದು ಸಂಡೂರಿನಲ್ಲಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 5:53 IST
Last Updated 17 ಏಪ್ರಿಲ್ 2021, 5:53 IST
ಸುದ್ದಿಗೋಷ್ಠಿ
ಸುದ್ದಿಗೋಷ್ಠಿ   

ಬಳ್ಳಾರಿ: 'ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿ ಏ.22 ರಂದು ಸಂಡೂರಿನ ವಾಲ್ಮೀಕಿ ಮಂದಿರದಲ್ಲಿ ಬೃಹತ್ ಸಮಾವೇಶವನ್ನು‌ ಹಮ್ಮಿಕೊಳ್ಳಲಾಗಿದೆ' ಎಂದು ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ತಿಳಿಸಿದರು.

'ಸಂಡೂರು ತಾಲ್ಲೂಕಿನಲ್ಲಿ ಅರಣ್ಯ ಹಕ್ಕು ಸಮಿತಿಯು ಸಮರ್ಪಕವಾಗಿ‌ ಕಾರ್ಯ ನಿರ್ಚಹಿಸುತ್ತಿಲ್ಲ. ಅರ್ಜಿಗಳ ಪರಿಶೀಲನೆ ಮಾಡಿ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸುವ ಸಲುವಾಗಿಯೇ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು' ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

'ಸಮಾವೇಶವನ್ನು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಯು.ಬಸವರಾಜ ಉದ್ಘಾಟಿಸಲಿದ್ದಾರೆ.ಸಂಘದ ಮುಖಂಡರಾದ ವಿ..ಎಸ್.ಶಿವಶಂಕರ್, ಸಿಐಟಿಯು ಮುಖಂಡರಾದ ಗಾಳಿ‌ ಬಸವರಾಜ್, ಆರ್.ಎಸ್.ಬಸವರಾಜ್ ಭಾಗವಹಿಸಲಿದ್ದಾರೆ' ಎಂದು ಮಾಹಿತಿ ನೀಡಿದರು.

ADVERTISEMENT

ಮುಖಂಡರಾದ ಎಚ್.ದುರ್ಗಮ್ಮ, ಯು.ತಿಪ್ಪೇಸ್ವಾಮಿ, ಜೆ.ಎಂ‌.ಚೆನ್ನಬಸವಯ್ಯ ಮಾರುತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.