ಬಳ್ಳಾರಿ: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ನಮ್ಮ ನಾಯಕರು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರ ಬಗ್ಗೆ ಅವರ ಹೇಳಿಕೆ ಸರಿಯಾಗಿಯೇ ಇದೆ’ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಸಮರ್ಥಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಹಿರಿಯರಾದ ದೊರೆಸ್ವಾಮಿಯವರು ಸ್ವಾತಂತ್ರ್ಯ ಹೋರಾಟಗಾರರು ಎನ್ನುತ್ತಾರೆ. ಆದರೆ, ದೇಶಭಕ್ತಿಯೂ ಇರಬೇಕಲ್ಲ. ಅವರು ಸಿಎಎ, ಎನ್ಆರ್ಸಿ ವಿರೋಧಿಸುವುದು ತಪ್ಪು. ದೇಶದ ಏಕತೆಯನ್ನು ಕಾಪಾಡಬೇಕು. ಅವರಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿದೆ. ಬಿಜೆಪಿಯವರನ್ನು ಪ್ರಚೋದಿಸಿ ಪ್ರತಿಭಟಿಸುವುದೂ ತಪ್ಪು’ ಎಂದು ಪ್ರತಿಪಾದಿಸಿದರು.
ವೈಯಕ್ತಿಕ ಹೇಳಿಕೆ ಸಲ್ಲದು: ‘ಯಾರೇ ಆಗಲೀ ವೈಯಕ್ತಿಕವಾಗಿ ಟೀಕಿಸುವುದು ತಪ್ಪು. ಪ್ರಪಂಚವೇ ಮೆಚ್ಚಿರುವ ಪ್ರಧಾನಿ ಮೋದಿಯವರನ್ನು ಸಿದ್ದರಾಮಯ್ಯನವರು ಕೊಲೆಗಡುಕ ಎನ್ನಬಹುದೇ’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.
‘ಯತ್ನಾಳ್, ಕುಮಾರಸ್ವಾಮಿ, ಸಿದ್ದರಾಮಯ್ಯ, ಯಾರೇ ಆಗಲಿ ಇನ್ನೊಬ್ಬರನ್ನು ವೈಯಕ್ತಿಕವಾಗಿ ಹೀಗಳೆಯಬಾರದು. ಇದು ಪ್ರಜಾಪ್ರಭುತ್ವವಿರುವ ದೇಶ. ಅಂಥ ಹೇಳಿಕೆಗಳನ್ನು ನೀಡಬಾರದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.