ADVERTISEMENT

ಎಸ್‌ಯುಸಿಐಸಿ ಅಭ್ಯರ್ಥಿ ದೇವದಾಸ್ ಮಾ.28ರಂದು ನಾಮಪತ್ರ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 6:01 IST
Last Updated 25 ಮಾರ್ಚ್ 2019, 6:01 IST
   

ಬಳ್ಳಾರಿ: ಲೋಕಸಭೆ ಚುನಾವಣೆಯಲ್ಲಿಎಸ್‌ಯುಸಿಐಸಿ ಅಭ್ಯರ್ಥಿಯಾಗಿ ಎ.ದೇವದಾಸ್ ಸ್ಪರ್ಧಿಸಲಿದ್ದಾರೆ. ಮಾರ್ಚ್ ೨೮ ರಂದು ನಾಮ ಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಕೆ.ಸೋಮಶೇಖರ್ ತಿಳಿಸಿದರು.

ಪಕ್ಷವು ಕಲಬುರಗಿ, ರಾಯಚೂರು, ಯಾದಗಿರಿ, ದಾವಣಗೆರೆ, ಧಾರವಾಡ, ಬೆಂಗಳೂರು ಗ್ರಾಮಾಂತರ, ಮೈಸೂರು ಸೇರಿ ಏಳು ಕ್ಷೇತ್ರದಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ನಗರದಲ್ಲಿ‌ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ಮೂವತ್ತು‌ ವರ್ಷಗಳಿಂದ ದೇವದಾಸ್ ಜಿಲ್ಲೆಯಲ್ಲಿ‌ ಜನಪರ ಹೋರಾಟಗಳಲ್ಲಿ ನಿರಂತರ ಪಾಲ್ಗೊಂಡಿದ್ದಾರೆ. 2014ರ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು ಎಂದರು.

ಕಾಂಗ್ರೆಸ್ ಬಿಜೆಪಿ ಮತ್ತು‌ ಒಂದೇ ನಾಣ್ಯದ ಎರಡು ಮುಖಗಳಂತೆ. ಕಾಂಗ್ರೆಸ್ ಸುಮಾರು ‌ಆರು ದಶಕಗಳ ಕಾಲ ಆಡಳಿತ ನಡೆಸಿದರೂ ದೇಶ‌ ಅಭಿವೃದ್ಧಿ ಕಾಣಲಿಲ್ಲ. ಆದರೆ ಇಂದು ಅದೇ ಪಕ್ಷವನ್ನು ಬಿಜೆಪಿಗೆ ಪರ್ಯಾಯ ಎಂದು ‌ಬಿಂಬಿಸುತ್ತಿರುವುದು‌‌ ವಿಷಾದನೀಯ ಎಂದರು.

ADVERTISEMENT

ಮುಖಂಡರಾದ ಶಾಂತಾ, ಮಂಜುಳಾ, ರಾಧಾಕೃಷ್ಣ‌ ಉಪಾಧ್ಯ, ಅಭ್ಯರ್ಥಿ ದೇವದಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.