ಹೊಸಪೇಟೆ: ಬೆಂಗಳೂರಿನ ಎಂ.ಎಸ್.ಟಿ.ಟಿ.ಎ. ಕ್ಲಬ್ನ ಅನರ್ಘ್ಯ ಮಂಜುನಾಥ ಹಾಗೂ ಸುಜನ್ ಭಾರದ್ವಾಜ್ ಸೋಮವಾರ ರಾತ್ರಿ ಇಲ್ಲಿ ನಡೆದ ಸಿ.ವಿ.ಎಲ್. ಶಾಸ್ತ್ರಿ ಸ್ಮರಣಾರ್ಥ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನ ಸಬ್ ಜೂನಿಯರ್ ವಿಭಾಗದಲ್ಲಿ ಜಯ ಸಾಧಿಸಿದರು.
ಅನರ್ಘ್ಯ ಅವರು ಅದೇ ಕ್ಲಬ್ನ ಎ. ನಿಹಾರಿಕಾ ಅವರನ್ನು 11–5, 11–3, 11–06 ಸೆಟ್ಗಳಿಂದ ಸೋಲಿಸಿದರೆ, ಸುಜನ್ ಅವರು ಎಸ್.ಕೆ.ಐ.ಇ.ಎಸ್. ಕ್ಲಬ್ನ ಕೆ.ಜೆ. ಆಕಾಶ ಅವರನ್ನು 11–8, 12–10, 11–4 ಸೆಟ್ಗಳಿಂದ ಮಣಿಸಿದರು.
ಇದಕ್ಕೂ ಮುನ್ನ ನಡೆದ ಸಬ್ ಜೂನಿಯರ್ ಬಾಲಕಿಯರ ವಿಭಾಗದ ಮೊದಲ ಸೆಮಿಫೈನಲ್ನಲ್ಲಿ ಅನರ್ಘ್ಯ ಅವರು ಬಿ.ಎನ್.ಎಂ. ಕ್ಲಬ್ನ ಎಂ. ದೇಶ್ನಾ ಅವರನ್ನು 11–7, 7–11, 11–3, 11–4 ಸೆಟ್ಗಳಿಂದ ಮಣಿಸಿದರೆ, ಮತ್ತೊಂದು ಸೆಮಿಫೈನಲ್ನಲ್ಲಿ ಎ. ನಿಹಾರಿಕಾ ಅವರು ಎಂ.ಟಿ.ಟಿ.ಎ. ಕ್ಲಬ್ನ ಪಿ.ಕೆ. ಪ್ರೇಕ್ಷಾ ಅವರನ್ನು 11–3, 11–13, 9–11, 11–2, 11–8ರಿಂದ ಸೋಲಿಸ ಅಂತಿಮ ಘಟ್ಟಕ್ಕೆ ಪ್ರವೇಶಿಸಿದರು.
ಬಾಲಕರ ವಿಭಾಗದ ಮೊದಲ ಸೆಮಿಫೈನಲ್ನಲ್ಲಿ ಕೆ.ಜೆ. ಆಕಾಶ್ ಅವರು ಬಿ.ಎನ್.ಎಂ.ನ ಸಮಕ್ಯ ಕಶ್ಯಪ್ ಅವರನ್ನು 11–7, 9–11, 11–8, 11–7ರಿಂದ ಸೋಲಿಸಿದರೆ, ಇನ್ನೊಂದು ಪಂದ್ಯದಲ್ಲಿ ಸುಜನ್ ಭಾರದ್ವಾಜ್ ಅವರು ಎಸ್.ಕೆ.ಐ.ಇ.ಎಸ್.ನ ಶ್ರೀಕಾಂತ ಕಶ್ಯಪ್ ಅವರನ್ನು 11–8, 8–11, 11–6, 11–7 ಸೋಲಿಸಿ ಅಂತಿಮ ಘಟ್ಟ ತಲುಪಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.