ADVERTISEMENT

ಶಿಕ್ಷಕರ ಸಂಘದ ಚುನಾವಣೆ ಉತ್ಸಾಹದಿಂದ ಹಕ್ಕು ಚಲಾವಣೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 10:12 IST
Last Updated 15 ಡಿಸೆಂಬರ್ 2020, 10:12 IST
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಚುನಾವಣೆಯಲ್ಲಿ ಮತ ಚಲಾವಣೆಗೆ ಮಂಗಳವಾರ ಹೊಸಪೇಟೆಯ ಪಿ.ಬಿ.ಎಸ್‌. ಶಾಲೆಗೆ ಬಂದಿದ್ದ ನೂರಾರು ಶಿಕ್ಷಕರು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಚುನಾವಣೆಯಲ್ಲಿ ಮತ ಚಲಾವಣೆಗೆ ಮಂಗಳವಾರ ಹೊಸಪೇಟೆಯ ಪಿ.ಬಿ.ಎಸ್‌. ಶಾಲೆಗೆ ಬಂದಿದ್ದ ನೂರಾರು ಶಿಕ್ಷಕರು   

ಹೊಸಪೇಟೆ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕಕ್ಕೆ ಮಂಗಳವಾರ ನಗರದ ಪಿ.ಬಿ.ಎಸ್‌. ಶಾಲೆಯಲ್ಲಿ ಚುನಾವಣೆ ನಡೆಯಿತು.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಹಕ್ಕು ಚಲಾಯಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಮತ ಹಾಕುವುದಕ್ಕೆ ಬಂದದ್ದರಿಂದ ಶಾಲೆ ಆವರಣದಲ್ಲಿ ಜನಜಾತ್ರೆ ಕಂಡು ಬಂತು.

ತಾಲ್ಲೂಕು ಘಟಕದ ಒಟ್ಟು 16 ಸ್ಥಾನಗಳಿಗೆ ಚುನಾವಣೆ ನಡೆಯಿತು. ಈ ಪೈಕಿ 5 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಒಟ್ಟು 782 ಮತದಾರರಿದ್ದಾರೆ. ಬೆಳಿಗ್ಗೆ 7.30ರಿಂದ ಸಂಜೆ 4ರ ವರೆಗೆ ಮತದಾನಕ್ಕೆ ಸಮಯ ನಿಗದಿಪಡಿಸಲಾಗಿತ್ತು. ಮತದಾನಕ್ಕೆ ಮತ ಪತ್ರಗಳ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಮಾರ್ಗದಪ್ಪ–ಬಸವರಾಜ ನೇತೃತ್ವದ ಸಮಾನ ಮನಸ್ಕರ ತಂಡ, ಚಂದ್ರಶೇಖರ್‌ ನೇತೃತ್ವದ ಶಿಕ್ಷಕರ ಹಿತರಕ್ಷಣ ವೇದಿಕೆಯ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಆರ್‌. ಮಂಜಪ್ಪ, ಎಸ್‌. ಕಾಶಿನಾಥಯ್ಯ, ರೇಣುಕಾ ಹಾಗೂ ವಿಜಯಕುಮಾರಿ ಅವರು ಸ್ವತಂತ್ರ ಅಭ್ಯರ್ಥಿಗಳಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮಂಗಳವಾರ ತಡರಾತ್ರಿ ಫಲಿತಾಂಶ ಬರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.