ಹೊಸಪೇಟೆ (ವಿಜಯನಗರ): ಇಲ್ಲಿನ ಅರವಿಂದ ನಗರದಲ್ಲಿ ಇಬ್ರಾಹಿಂ ಎಂಬುವರ ಮನೆಗೆ ಕಳ್ಳರು ಕನ್ನ ಹಾಕಿದ್ದು, ₹13 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿರುವ ಘಟನೆ ಸೋಮವಾರ ನಡೆದಿದೆ.
ಇಬ್ರಾಹಿಂ ಅವರು ಕುಟುಂಬ ಸದಸ್ಯರೊಡನೆ ಆಂಧ್ರ ಪ್ರದೇಶಕ್ಕೆ ಹೋಗಿದ್ದಾಗ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಮನೆಯ ಗ್ರಿಲ್ ಬೀಗ, ಮನೆ ಬಾಗಿಲಿನ ಚಿಲಕದ ಕೊಂಡಿ, ಸೆಂಟರ್ ಲಾಕ್ ಮುರಿದು ಮನೆಯೊಳಗೆ ನುಗ್ಗಿ ಎರಡು ಗೊದ್ರೇಜ್ ಲಾಕರ್, ಇಂಟರ್ ಲಾಕರ್ಗಳನ್ನು ಮುರಿದು ಚಿನ್ನಾಭರಣ, ನಗದು ಕಳವು ಮಾಡಿದ್ದಾರೆ.
ನಿವೃತ್ತಿ ಹಣ ಹಾಗೂ ಮಗನ ಮದುವೆ ನಾಮಕರಣದ ಸಂದರ್ಭದಲ್ಲಿ ಉಡುಗೊರೆಯಾಗಿ ಬಂದಿದ್ದ ಚಿನ್ನಾಭರಣಗಳನ್ನು ಮನೆಯಲ್ಲಿ ಇಟ್ಟಿದ್ದರು. ನೆಕ್ಲೆಸ್, ಬಳೆ, ಉಂಗುರ, ಕಿವಿಯೊಲೆ, ಮಾಂಟಿಲ್, ಜುಮುಕಿ, ಕೊರಳ ಚೈನ್ ಸೇರಿದಂತೆ ಒಟ್ಟು ₹12.60 ಲಕ್ಷ ಮೌಲ್ಯದ ಚಿನ್ನಾಭರಣ, ₹36 ಸಾವಿರ ಬೆಲೆಬಾಳುವ ಬೆಳ್ಳಿ ಒಡವೆ ಹಾಗೂ ₹11 ಸಾವಿರ ನಗದು ಕದ್ದೊಯ್ದಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.