ADVERTISEMENT

ಕನಿಷ್ಠ ಕೂಲಿ ನೀಡದೆ ವಂಚನೆ: ಆರೋಪ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 16:11 IST
Last Updated 14 ಸೆಪ್ಟೆಂಬರ್ 2024, 16:11 IST
ಕುಡತಿನಿಯಲ್ಲಿ ಬಿಟಿಪಿಎಸ್ ಕಾರ್ಮಿಕ ಮುಖಂಡರು ಪಿಎಸ್‍ಐ ಶಾಂತಮೂರ್ತಿ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು
ಕುಡತಿನಿಯಲ್ಲಿ ಬಿಟಿಪಿಎಸ್ ಕಾರ್ಮಿಕ ಮುಖಂಡರು ಪಿಎಸ್‍ಐ ಶಾಂತಮೂರ್ತಿ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು    

ಕುಡತಿನಿ (ತೋರಣಗಲ್ಲು): ಸಮೀಪದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ (ಬಿಟಿಪಿಎಸ್) ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ನೀಡದ ಬಿಟಿಪಿಎಸ್ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕಾರ್ಮಿಕ ಹಿತರಕ್ಷಣಾ ವೇದಿಕೆಯ ಮುಖಂಡರು ಈಚೆಗೆ ಪಿಎಸ್‍ಐ ಶಾಂತಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ವೇದಿಕೆ ಅಧ್ಯಕ್ಷ ವಿ. ರಾಜಶೇಖರ್ ಮಾತನಾಡಿ, ‘1,600ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಹಲವಾರು ವರ್ಷಗಳಿಂದ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಕನಿಷ್ಠ ವೇತನ ನೀಡದೆ ವಂಚಿಸಲಾಗಿದೆ. ಕನಿಷ್ಠ ವೇತನದ ಕಾಯ್ದೆ  ಅನುಸಾರ ವೇತನ ನೀಡದಿದ್ದರೆ ಬಿಟಿಪಿಎಸ್ ಮುಖ್ಯದ್ವಾರದಲ್ಲಿ ಹೋರಾಟ ನಡೆಸಲಾಗುವುದು’ ಎಂದರು.

‘ಬಿಟಿಪಿಎಸ್ ಅಧಿಕಾರಿಗಳು, ಗುತ್ತಿಗೆದಾರರ ಸಭೆ ನಡೆಸಿ, ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕುಡತಿನಿ ಠಾಣೆಯ ಪಿಎಸ್‍ಐ ಶಾಂತಮೂರ್ತಿ ಭರವಸೆ ನೀಡಿದರು.

ADVERTISEMENT

ಮುಖಂಡರಾದ ವೆಂಕಟರಮಣ ಬಾಬು, ಮಹಾಂತೇಶ್ ಗೋಪಾಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.