
ಕಂಪ್ಲಿ: ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ಗಳ ಅಳವಡಿಕೆ ಕಾಮಗಾರಿ ಆರಂಭವಾಗಿರುವುದರಿಂದ ಈ ಬಾರಿ ಹಿಂಗಾರು ಹಂಗಾಮು ಭತ್ತ ನಾಟಿ ಕಂಪ್ಲಿ ತಾಲ್ಲೂಕಿನ ಮಟ್ಟಿಗೆ ತುಂಗಭದ್ರಾ ನದಿ ಪಾತ್ರ, ವಿಜಯನಗರ ಕಾಲುವೆ, ಕೆರೆ, ಪಂಪ್ಸೆಟ್, ಏತ ನೀರಾವರಿಗೆ ಮಾತ್ರ ಸೀಮಿತವಾಗಿದೆ.
ಈಗಾಗಲೇ ಭತ್ತದ ಸಸಿ ಸಮೃದ್ಧವಾಗಿ ಬೆಳೆದಿದ್ದು, ಭತ್ತ ನಾಟಿ ಪೂರ್ವ ಸಿದ್ಧತೆ ನದಿ ಪರಧಿಯ ಗದ್ದೆಗಳಲ್ಲಿ ಶುರುವಾಗಿದೆ. 90ರಿಂದ 100ದಿನದಲ್ಲಿ ಕೈಗೆಟಕುವ ಗಂಗಾ ಕಾವೇರಿ, ಆರ್.ಎನ್.ಆರ್, 1638, ಎಂ.ಎಸ್-2 ತಳಿ ಭತ್ತವನ್ನು ಬೆಳೆಯಲು ರೈತರು ಮುಂದಾಗಿದ್ದಾರೆ.
ಕಳೆದ ಮುಂಗಾರು ಕೊನೆ ಹಂತದಲ್ಲಿ ಹವಾಮಾನ ವೈಪರಿತ್ಯ, ದುಂಡಾಣು ರೋಗ ತಗುಲಿದ ಪರಿಣಾಮ ಸೋನಾ ಮಸೂರಿ, ಆರ್.ಎನ್.ಆರ್, ನೆಲ್ಲೂರು ಸೋನಾ, ಮತ್ತು 1010(ಐ.ಆರ್-64) ತಳಿ ಭತ್ತದ ಇಳುವರಿ ಕುಂಠಿತವಾಗಿ ನದಿ ವ್ಯಾಪ್ತಿಯ ರೈತರಲ್ಲಿ ನಿರಾಶೆ ಮೂಡಿಸಿತ್ತು. ಬೇಸಿಗೆ ಹಂಗಾಮಿನಲ್ಲಿಯಾದರೂ ಉತ್ತಮ ದರ ದೊರೆಯಬಹುದು ಎನ್ನುವ ನಿರೀಕ್ಷೆಯಲ್ಲಿ ಬೇಸಿಗೆ ಭತ್ತ ನಾಟಿಗೆ ಉತ್ಸುಕರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.