ADVERTISEMENT

ವೆಂಕಟೇಶ್‌ ಕುಮಾರ್, ಕವಿತಾ ಮಿಶ್ರಾ, ದಿ. ಹಿರೇಹಾಳ್‌ ಇಬ್ರಾಹಿಂಗೆ ಗೌರವ ಡಾಕ್ಟರೇಟ್‌

ವಿಎಸ್‌ಕೆವಿವಿ 11ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 16:16 IST
Last Updated 12 ಜುಲೈ 2023, 16:16 IST
ಪಂ. ವೆಂಕಟೇಶ್‌ ಕುಮಾರ್‌
ಪಂ. ವೆಂಕಟೇಶ್‌ ಕುಮಾರ್‌   

ಬಳ್ಳಾರಿ: ಹಿಂದೂಸ್ತಾನಿ ಗಾಯಕ ಪಂಡಿತ ವೆಂಕಟೇಶ್‌ ಕುಮಾರ್‌, ರಾಯಚೂರಿನ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಮತ್ತು ಗಡಿ ಭಾಗದ ಸಮಾಜಸೇವಕ ದಿ. ಹಿರೇಹಾಳ್‌ ಇಬ್ರಾಹಿಂ ಅವರನ್ನು ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ (ವಿಎಸ್‌ಕೆಯು) ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿದೆ.

ಜುಲೈ 13ರಂದು ನಡೆಯುವ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ. ಸಿದ್ದು ಪಿ. ಅಲಗೂರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪಂಡಿತ ವೆಂಕಟೇಶ್‌ ಕುಮಾರ್ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಕವಿತಾ ಮಿಶ್ರಾ ಕೃಷಿ ಮತ್ತು ಕೃಷಿ ಆಧಾರಿತ ಉದ್ಯಮದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಹಿರೇಹಾಳ್ ಇಬ್ರಾಹಿಂ ಗಡಿ ನಾಡಿನಲ್ಲಿ ಸಮಾಜ ಸೇವೆಯ ಜತೆಗೆ ಕನ್ನಡ ಭಾಷೆ, ಸಂಸ್ಕೃತಿ ಬೆಳೆಸಲು ಶ್ರಮಿಸಿದ್ದು, ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುವುದು’ ಎಂದರು.

ADVERTISEMENT
ಕವಿತಾ ಮಿಶ್ರಾ
ದಿ. ಹಿರೇಹಾಳ್‌ ಇಬ್ರಾಹಿಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.