ಹೊಸಪೇಟೆ(ವಿಜಯನಗರ): ವೇಟ್ ಲಿಫ್ಟರ್ ಹಾಗೂ ಕ್ರೀಡಾ ತರಬೇತುದಾರರಾಗಿದ್ದ ನಗರದ ಕಿಚಡಿ ದಯಾನಂದ(55) ಬುಧವಾರ ಬೆಳಿಗ್ಗೆ ಕೋವಿಡ್–19ನಿಂದ ನಿಧನರಾದರು.
ಮೃತರಿಗೆ ಪತ್ನಿ, ಮಗ ಇದ್ದಾರೆ. ಸಂಜೆ ನಗರದಲ್ಲಿ ಅಂತ್ಯಕ್ರಿಯೆ ಜರುಗಿತು. 25 ದಿನಗಳ ಹಿಂದೆ ಕಾಶ್ಮೀರದಲ್ಲಿ ನಡೆದ ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡು ಇತ್ತೀಚೆಗೆ ವಾಪಸ್ ಆಗಿದ್ದ ಅವರಿಗೆ ಸೋಂಕು ತಗುಲಿತ್ತು. ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಇವರ ಪತ್ನಿ ಲಕ್ಷ್ಮಿದೇವಿ ಸಹ ವೇಟ್ಲಿಫ್ಟರ್ ಆಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.