ADVERTISEMENT

ಯಡಿಯೂರಪ್ಪ ಮಗ ವಿಜಯೇಂದ್ರ ಸೂಪರ್ ಸಿಎಂ ಅಲ್ಲ‌‌: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 7:41 IST
Last Updated 25 ಫೆಬ್ರುವರಿ 2020, 7:41 IST
ವಸತಿ ಸಚಿವ ವಿ.ಸೋಮಣ್ಣ
ವಸತಿ ಸಚಿವ ವಿ.ಸೋಮಣ್ಣ   

ಬಳ್ಳಾರಿ: ‘ಬಿ.ಎಸ್ ಯಡಿಯೂರಪ್ಪ ಅವರು ಹೋರಾಟಗಾರರು. ಅವರ ಅಂತ್ಯವೂ ಹೋರಾಟದಲ್ಲೇ ಮುಗಿಯಬೇಕು‌. ಅವರ ಉತ್ತರಾಧಿಕಾರಿ ಕುರಿತಾದ ಯಾವುದೇ ಊಹಾಪೋಹಗಳಿಲ್ಲ. ಅವರೇ ಮುಖ್ಯ ಮಂತ್ರಿಯಾಗಿರುತ್ತಾರೆ’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಪ್ರಶ್ನಾತಿತ ನಾಯಕ. ಅವರ ಮಗ ವಿಜಯೇಂದ್ರ ಸೂಪರ್ ಸಿಎಂ ಅಲ್ಲ‌‌. ಸಿಎಂಗೆ 78 ಆಗಿರಬಹುದು. ಹಾಗೆಂದು ವಿಜಯೇಂದ್ರ ಉತ್ತರಾಧಿಕಾರಿ ಅಲ್ಲ. ನಲ್ವತ್ತೆರಡು ವರ್ಷ, ಏಳು ಜನ ಸಿಎಂಗಳ ಜೊತೆ ಕೆಲಸ ಮಾಡಿದ್ದೇನೆ. ಒಬ್ಬರನ್ನು ಮುಖ್ಯಮಂತ್ರಿ ಮಾಡಲು ಏನು ಮಾಡಲಾಗಿದೆ ಎಲ್ಲವೂ ಗೊತ್ತು, ಎಲ್ಲ ಅನುಭವವೂ ಇದೆ’ ಎಂದರು.

‘ವಸತಿ ಖಾತೆ ಕೊಟ್ಟಿರುವ ಕುರಿತು ಕೊಂಚ ನನಗೆ ಅಳುಕಿದೆ. ಆದರೆ, ಖಾತೆಯಿಂದ ಜನ ನಂಬುತ್ತಾರೆ. ಸೋಮಣ್ಣ ಬಂದರೆ ಮನೆ ಕೊಡುತ್ತಾನೆ ಎನ್ನುತ್ತಾರೆ’ ಎಂದು ಹೇಳಿದರು.

ADVERTISEMENT

‘ಇಬ್ರಾಹಿಂ ಎಂದಾದರೂ ನಿಜ ಹೇಳಿದಾರಾ? ನಾವೆಲ್ಲ ಜೊತೆಗಿದ್ದವರು. ಅವರು ನೆಸೆ ಪುಡಿ ಹಾಕ್ತಾರೆ ಅಷ್ಟೆ’ ಎಂದು ವ್ಯಂಗ್ಯವಾಡಿದರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಶಾಸಕ ಜಿ.ಸೋಮಶೇಖರರೆಡ್ಡಿ, ಸಂಸದ ದೇವೇಂದ್ರಪ್ಪ, ವಸತಿ‌ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮ್ ಪ್ರಸಾದ್ ಮನೋಹರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.