ADVERTISEMENT

ಜಲ ಸಂರಕ್ಷಣಾ ಆಂದೋಲನ ಜಾಗೃತಿಗೆ ಚಾಲನೆ

ದೇವನಹಳ್ಳಿ: ಕೆರೆಗಳಿಗೆ ಮರುಜೀವ ನೀಡಲು ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 3 ಮೇ 2014, 8:25 IST
Last Updated 3 ಮೇ 2014, 8:25 IST
ದೇವನಹಳ್ಳಿ ಮಹಿಳಾ ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ ಕಚೇರಿ ಅವರಣದಲ್ಲಿ ಶುಕ್ರ ವಾರ ಬಸವ ಜಯಂತಿ ಪ್ರಯುಕ್ತ ‘ಜಲ ಸಂರಕ್ಷಣಾ ಆಂದೋಲನ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸೇವಾದಲ ಅಧ್ಯಕ್ಷ ಲಕ್ಷ್ಮೀನಾರಾಯಣ, ಎಂ.ಪಿ.ಸಿ.ಎಸ್‌ ಅಧ್ಯಕ್ಷ ಶಿವರಾಮಯ್ಯ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಮುನಿಶಾಮೇಗೌಡ, ಪ್ರಧಾನ ಕಾರ್ಯದರ್ಶಿ ರವೀಂದ್ರ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ, ಕಾರಹಳ್ಳಿ ಶ್ರೀನಿವಾಸ್‌, ತಾಲ್ಲೂಕು ಪಂಚಾಯ್ತಿ ಸದಸ್ಯ ಬಿ.ಕೆ.ಶಿವಪ್ಪ ಇದ್ದರು
ದೇವನಹಳ್ಳಿ ಮಹಿಳಾ ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ ಕಚೇರಿ ಅವರಣದಲ್ಲಿ ಶುಕ್ರ ವಾರ ಬಸವ ಜಯಂತಿ ಪ್ರಯುಕ್ತ ‘ಜಲ ಸಂರಕ್ಷಣಾ ಆಂದೋಲನ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸೇವಾದಲ ಅಧ್ಯಕ್ಷ ಲಕ್ಷ್ಮೀನಾರಾಯಣ, ಎಂ.ಪಿ.ಸಿ.ಎಸ್‌ ಅಧ್ಯಕ್ಷ ಶಿವರಾಮಯ್ಯ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಮುನಿಶಾಮೇಗೌಡ, ಪ್ರಧಾನ ಕಾರ್ಯದರ್ಶಿ ರವೀಂದ್ರ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ, ಕಾರಹಳ್ಳಿ ಶ್ರೀನಿವಾಸ್‌, ತಾಲ್ಲೂಕು ಪಂಚಾಯ್ತಿ ಸದಸ್ಯ ಬಿ.ಕೆ.ಶಿವಪ್ಪ ಇದ್ದರು   

ದೇವನಹಳ್ಳಿ:  ‘ಸಮಾನತೆಯ ಹರಿಕಾರ ಜಗ­-ಜ್ಯೋತಿ ಬಸವೇಶ್ವರರ ಕನಸು ನನಸಾಗಿ­ಸುವ ನಿಟ್ಟಿನಲ್ಲಿ ಆರೋಗ್ಯ­ಪೂರ್ಣ ಸಮಾಜದ ನಿರ್ಮಾಣಕ್ಕಾಗಿ ಜಲ ಸಂರಕ್ಷಣೆ ಇಂದಿನ  ಅನಿವಾರ್ಯ­ವಾಗಿದೆ’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಬಿ.ಕೆ.ಶಿವಪ್ಪ ಅಭಿ­ಪ್ರಾಯ­ಪಟ್ಟರು.

ದೇವನಹಳ್ಳಿ ಮಹಿಳಾ ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ ಕಚೇರಿ ಅವರಣ­ದಲ್ಲಿ ಶುಕ್ರವಾರ ಬಸವ ಜಯಂತಿ ಪ್ರಯುಕ್ತ ತಾಲ್ಲೂಕು ಅಭಿ­ವೃದ್ಧಿ ಸಮಿತಿ ಹಾಗೂ ಮಹಿಳಾ ಗ್ರಾಮೀಣ ವಿದ್ಯಾಭಿ­ವೃದ್ಧಿ ಸಂಸ್ಥೆ ವತಿ­ಯಿಂದ ಹಮ್ಮಿ­ಕೊಂಡಿದ್ದ ಜಲ ಸಂರ­ಕ್ಷಣಾ ಆಂದೋ­ಲನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಣ್ಣ ಕನಸು ಕಂಡ ಸಮೃದ್ಧ­ಪೂರ್ಣ ಸಮಾಜದ ನಿರ್ಮಾಣಕ್ಕೆ ಪ್ರಕೃ­ತಿಯ ಸಂಪತ್ತಿನ ರಕ್ಷಣೆ ಇಂದು ಅವಶ್ಯಕವಾಗಿದೆ. ಬಯಲು ಸೀಮೆಯ ತಾಲ್ಲೂಕು ಎಂಬ ಹಣೆಪಟ್ಟಿಗೆ ಒಳಗಾಗಿ ಬರ­ದಿಂದ ಬಳಲುತ್ತಿರುವ ದೇವನಹಳ್ಳಿಯಲ್ಲಿ ಜಲ ಸಂರಕ್ಷಣೆಗೆ ಇಂದಿನಿಂದ ಎಲ್ಲರೂ ಪಣತೊಡ­ಬೇಕಾಗಿದೆ’ ಎಂದು ಅವರು ಹೇಳಿದರು.

‘ತಾಲ್ಲೂಕಿಗೆ ಬರ ಎಂಬುದು ಶಾಶ್ವತ­ವಾಗಿ ಅಂಟಿರುವ ಶಾಪವಾಗಿದೆ. ವರ್ಷವೂ ಇದು ಮುಂದುವರೆಯು­ತ್ತಲೇ ಇದೆ. ಮಾನವನ ದುರಾಸೆಗೆ ನೀರು, ಮರಳು ಮಣ್ಣು, ಕಲ್ಲು ಸೇರಿ­ದಂತೆ ಪ್ರಕೃತಿಯ ಎಲ್ಲ ಅಮೂಲ್ಯ ಸಂಪತ್ತುಗಳೂ ಕರಗುತ್ತಿವೆ. ಅಂರ್ತಜಲ ಪಾತಾ­ಳಕ್ಕೆ ಇಳಿದಿದೆ. ಈ ದಿಸೆಯಲ್ಲಿ ಜಲ­ಮೂಲಗಳನ್ನು ಉಳಿಸುವ ನಿಟ್ಟಿನಲ್ಲಿ ಕೆರೆ, ಕಾಲುವೆಗಳ ಸಂರಕ್ಷಣೆಯಾಗ­ಬೇಕಿದೆ. ತಾಲ್ಲೂಕಿನ ಎಲ್ಲ ರಾಜ­ಕಾಲುವೆ­ಗಳ ದುರಸ್ತಿ, ಅವುಗಳ ಒತ್ತುವರಿ ತೆರವು, ನೀರಿನ ಮಿತ ಬಳಕೆ, ಮಳೆನೀರು ಸಂಗ್ರಹಣೆಯ ಕುರಿತು ಅರಿವು ಮೂಡಿಸುವುದಕ್ಕಾಗಿ ಈ ದಿನ­ದಂದು ಸಂಕಲ್ಪ ಮಾಡಲಾಗುತ್ತಿದೆ. ಇದು ನಮ್ಮ ಜೀವ ಸಂಕುಲಗಳ ಉಳಿವಿ­ಗಾಗಿ ಒಂದು ಕಿರು ಪ್ರಯತ್ನ. ಈ ಪ್ರಯ­ತ್ನಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಅವರು ಮನವಿ ಮಾಡಿದರು.

ಎಂ.ಪಿ.ಸಿ.ಎಸ್‌ ಅಧ್ಯಕ್ಷ ಶಿವ­ರಾಮಯ್ಯ ಮಾತನಾಡಿ, ‘ಬಸವಣ್ಣನ ಚಿಂತನೆಯ ಜೊತೆಗೆ ಪ್ರತಿಯೊಂದು ಗ್ರಾಮ,ಬಡಾವಣೆಗಳಲ್ಲಿ ನೀರು ಮರು ಬಳಕೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳ­ಬೇಕು’ ಎಂದು ಪ್ರತಿಪಾದಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್‌ ಮಾತ­­ನಾಡಿ, ‘ತಾಲ್ಲೂಕಿನಲ್ಲಿ ಮುಚ್ಚಿ­ಹೋಗಿ­ರುವ ಕೆರೆಗಳ ಹೂಳೆತ್ತುವ ಮೂಲಕ ಅವುಗಳನ್ನು ಸ್ವಚ್ಛಗೊಳಿಸ ಬೇಕಿದೆ. ಜೀವಜಲಕ್ಕೆ ಪರಿತಪಿಸುವ ದಿನ­ಗಳನ್ನು ದೂರಾಗಿಸಬೇಕಿದೆ’ ಎಂದರು.

ತಾಲ್ಲೂಕು ಸೇವಾದಲ ಅಧ್ಯಕ್ಷ ಲಕ್ಷ್ಮೀನಾರಾಯಣ, ಮಹಿಳಾ ಗ್ರಾಮೀಣ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷೆ ಸೂರ್ಯಕಲಾ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಮುನಿ­ಶಾಮೇ­ಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ತಾಲ್ಲೂಕು ದಲಿತ ಸೇನೆಯ ಅಧ್ಯಕ್ಷ ಸಿ.ಮುನಿಯಪ್ಪ, ಉಷಾ ಪೂರ್ಣಚಂದ್ರ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕ­ಟೇಶ್‌, ಜಾಲಿಗೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಸ್‌.ಎಂ. ಆನಂದ್‌ ಕುಮಾರ್‌, ಸುಜಾತ, ಅಮರ್‌ ನಾಯಕ್‌ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.