ADVERTISEMENT

ಮೊದಲ ದಿನ ನಾಮಪತ್ರ ಇಲ್ಲ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 9:27 IST
Last Updated 20 ಮಾರ್ಚ್ 2014, 9:27 IST

ರಾಮನಗರ: ಬೆಂಗಳೂರು ಗ್ರಾಮಾಂ­ತರ ಲೋಕಸಭಾ ಕ್ಷೇತ್ರದ ಚುನಾವ­ಣೆಗೆ ಸಂಬಂ­ಧಿಸಿದಂತೆ ಚುನಾವಣಾ ಅಧಿ­ಕಾರಿಯೂ ಅದ ಜಿಲ್ಲಾಧಿಕಾರಿ ಡಾ.ಡಿ.ಎಸ್‌.ವಿಶ್ವ­­ನಾಥ್‌ ಅವರು ಬುಧವಾರ ಅಧಿಸೂಚನೆ ಹೊರ­ಡಿಸಿದ್ದು, ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

20ರಂದು ಕಾಂಗ್ರೆಸ್‌ ನಾಮಪತ್ರ: ಹಾಲಿ ಸಂಸದ ಹಾಗೂ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರು ಗುರುವಾರ (ಮಾ.20)­ಉಮೇ­ದುವಾರಿಕೆ ಸಲ್ಲಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ತಿಳಿಸಿದೆ.

ಸುರೇಶ್ ಅವರು ನಾಮಪತ್ರ ಸಲ್ಲಿ­ಸು­ವುದಕ್ಕೂ ಮುನ್ನ ಬೆಳಿಗ್ಗೆ 9 ಗಂಟೆಗೆ ನಗರದ ಶಕ್ತಿ ದೇವತೆ ಚಾಮುಂ­ಡೇಶ್ವರಿ ದೇವಿಯ ದೇವಾ­ಲಯಕ್ಕೆ ಹೋಗಿ ಪೂಜೆ ನೆರವೇ­ರಿಸಲಿದ್ದಾರೆ. ಬಳಿಕ ಚರ್ಚ್‌ ಮತ್ತು ಮಸೀದಿಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿ ಚುನಾವಣಾ ಅಧಿ­ಕಾರಿ ಕಚೇ­ರಿಗೆ ಮುಖಂಡರೊಂದಿಗೆ ತೆರಳು­ವರು ಎಂದು ಗೊತ್ತಾಗಿದೆಜಿಲ್ಲಾ ಉಸ್ತುವಾರಿ ಸಚಿ­ವರೂ ಆದ ಇಂಧನ ಸಚಿವ ಡಿ.ಕೆ.ಶಿವ­ಕುಮಾರ್‌, ಮುಖಂಡರಾದ ಸಿ.ಎಂ.ಲಿಂ­ಗ­ಪ್ಪ, ಮರಿ­ದೇವರು, ಎ.ಮಂಜುನಾಥ್‌, ಡಿಸಿಸಿ ಅಧ್ಯಕ್ಷ ಸೈಯದ್‌ ಜಿಯಾವುಲ್ಲಾ ಅವರು ಸುರೇಶ್‌ ಅವರೊಂದಿಗೆ ಭಾಗವಹಿ­ಸುವರು.  ಮುಖ್ಯಮಂತ್ರಿ ಸಿದ್ದರಾ­ಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರ­­ಮೇಶ್ವರ್‌ ಅವರೂ ಪಾಲ್ಗೊ­ಳ್ಳುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಮುಖಂಡರು ತಿಳಿಸಿದ್ದಾರೆ.

22ರಂದು ಎಎಪಿ: ಆಮ್‌ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ರವಿ ಕೃಷ್ಣಾ­ರೆಡ್ಡಿ ಅವರು ಇದೇ 22ರಂದು ನಾಮ­ಪತ್ರ ಸಲ್ಲಿಸಲಿದ್ದಾರೆ. ಸಮಾಜ ಪರಿ­ವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.­ಹಿರೇ­­­ಮಠ ಸೇರಿದಂತೆ ಹಲವು ಮುಖಂ­ಡರು, ಎಎಪಿ ಕಾರ್ಯಕರ್ತರು ಪಾಲ್ಗೊ­ಳ್ಳು­ವರು ಎಂದು ಗೊತ್ತಾಗಿದೆ.

24ರಂದು ಜೆಡಿಎಸ್‌: ಜೆಡಿಎಸ್‌ ಅಭ್ಯರ್ಥಿ ಪ್ರಭಾಕರ ರೆಡ್ಡಿ ಅವರು ಇದೇ 24ರಂದು ನಾಮಪತ್ರ ಸಲ್ಲಿಸು­ತ್ತಾರೆ ಎಂದು ತಿಳಿದು ಬಂದಿದೆ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಶಾಸಕ ಎಚ್‌.ಸಿ.ಬಾಲಕೃಷ್ಣ, ಜಿ.ಪಂ ಅಧ್ಯಕ್ಷ ಎಚ್‌.ಸಿ.ರಾಜಣ್ಣ, ಮುಖಂ­ಡ­ರಾದ ಕೆ.ರಾಜು, ರಾಜಶೇಖರ್‌, ಕೂಟ­ಗಲ್‌ ದೇವೇಗೌಡ ಇತರರು ಭಾಗವಹಿ­ಸುವರು ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

26ರಂದು ಬಿಜೆಪಿ:  ಉಮೇದುವಾರಿಕೆ ಸಲ್ಲಿಸುವ ಕೊನೆಯ ದಿನವಾದ ಇದೇ 26ರಂದು ಬಿಜೆಪಿ ಅಭ್ಯರ್ಥಿ ಮುನಿ­ರಾಜುಗೌಡ ಅವರು ನಾಮಪತ್ರ ಸಲ್ಲಿಸುವರು. ಪಕ್ಷದ ಹಿರಿಯ ಮುಖಂ­ಡರಾದ ಬಿ.ಎಸ್‌.ಯಡಿಯೂರಪ್ಪ, ಅನಂ­ತಕುಮಾರ್‌, ಆರ್‌.ಅಶೋಕ ಸೇರಿದಂತೆ ಹಲವರು ಭಾಗವಹಿಸುವರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಜೆಪಿ ಅಭ್ಯರ್ಥಿ ಗುರುವಾರವೇ (20) ನಾಮಪತ್ರ ಸಲ್ಲಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.