ಆನೇಕಲ್: ಮೀಟರ್ ಬದಲಾಯಿಸಲು ಲಂಚದ ಬೇಡಿಕೆಯಿಟ್ಟಿದ್ದ ಬೆಸ್ಕಾಂ ಎಇ ನಂಜುಂಡಸ್ವಾಮಿ ಮತ್ತು ಮೀಟರ್ ರೀಡರ್ ರಾಜೇಶ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಪಟ್ಟಣದ ಪ್ರಕಾಶ್ ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಎಸಿಬಿ ಡಿವೈಎಸ್ಪಿ ಗೋಪಾಲ್ ಡಿ. ಜೋಗಿ ಮತ್ತು ಇನ್ಸ್ಪೆಕ್ಟರ್ಗಳಾದ ಕುಮಾರಸ್ವಾಮಿ ಮತ್ತು ಮಧುಕರ್ ಅವರು ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು.
ಪ್ರಕಾಶ್ ಅವರಿಂದ ಮೀಟರ್ ರೀಡರ್ ರಾಜೇಶ್ ₹ 65 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.ಪಟ್ಟಣದ ಪ್ರಕಾಶ್ ಎಂಬುವವರು
ತಮ್ಮ ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದು ಈ ಮಾಹಿತಿ ಪಡೆದ ಆರೋಪಿಗಳು ₹ 1.85 ಲಕ್ಷ ದಂಡ ಕಟ್ಟುವಂತೆ ಪ್ರಕಾಶ್ಗೆ ತಿಳಿಸಿದ್ದರು. ಆದರೆ ಇಷ್ಟೊಂದು
ಹಣ ಕಟ್ಟಲು ಸಾಧ್ಯವಿಲ್ಲ ಎಂದಾಗ 65 ಸಾವಿರ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.