ADVERTISEMENT

ಪಟಾಕಿ ಗೋದಾಮಿಗೆ ಬೆಂಕಿ ತಪ್ಪಿದ ಭಾರಿ ಅನಾಹುತ

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 20:54 IST
Last Updated 25 ಜನವರಿ 2024, 20:54 IST
ತಮಿಳುನಾಡಿನ ಜೀಮಂಗಲಂ ಗ್ರಾಮದ ಪಟಾಕಿ ಗೋದಾಮಿಗೆ ಬೆಂಕಿ ತಗುಲಿದ್ದರಿಂದ ಹೊತ್ತಿಉರಿಯುತ್ತಿರುವ ಗೋದಾಮು
ತಮಿಳುನಾಡಿನ ಜೀಮಂಗಲಂ ಗ್ರಾಮದ ಪಟಾಕಿ ಗೋದಾಮಿಗೆ ಬೆಂಕಿ ತಗುಲಿದ್ದರಿಂದ ಹೊತ್ತಿಉರಿಯುತ್ತಿರುವ ಗೋದಾಮು   

ಆನೇಕಲ್: ತಾಲ್ಲೂಕಿನ ಗಡಿ ಭಾಗ ಹೊಸೂರು ಬಳಿ ಇರುವ ಜೀಮಂಗಲಂನಲ್ಲಿ ಪಟಾಕಿ ದುರಂತ ಸಂಭವಿಸಿದ್ದು, ಕಾರ್ಮಿಕರ ಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದೆ.

ಗೋದಾಮಿನಲ್ಲಿ ಗುರುವಾರ ಹಠಾತ್‌ನೆ ಬೆಂಕಿ ಹೊತ್ತುಕೊಂಡಿದ್ದರಿಂದ ಕಾರ್ಮಿಕರು ಹೊರ ಬಂದಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ದುರಂತದಲ್ಲಿ ಪಟಾಕಿಗಳು ಒಮ್ಮೆಲೆ ಸಿಡಿದಿದ್ದರಿಂದ ಸುತ್ತಮುತ್ತಲ ಗ್ರಾಮಗಳ ಜನರು ಆತಂಕಗೊಂಡರು. ಒಂದೆಡೆ ದಟ್ಟವಾದ ಹೊಗೆ ಮತ್ತೊಂದೆಡೆ ಪಟಾಕಿಗಳ ಶಬ್ದ ಸುತ್ತಮುತ್ತಲಿನ ನಿವಾಸಿಗಳನ್ನು ಘಾಸಿಗೊಳಿಸಿತು. ಅಗ್ನಿಶಾಮಕದಳದ ಸಿಬ್ಬಂದಿ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಚರಣೆ ನಡೆಸಿದರು.

ADVERTISEMENT

ಕಳೆದ ಅಕ್ಟೋಬರ್‌ 7ರಂದು ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ 17ಮಂದಿ ಮೃತಪಟ್ಟಿದ್ದರು. ತಮಿಳುನಾಡಿನ ಹೊಸೂರು ಸಮೀಪದಲ್ಲಿಯೂ ಪಟಾಕಿ ದುರಂತ ಸಂಭವಿಸಿತ್ತು.

ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕದಳದ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.