ಆನೇಕಲ್: ತಾಲ್ಲೂಕು ವಕೀಲರ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ವಕೀಲ ಪ್ರಕಾಶ್.ವೈ ಅವರ ನೇತೃತ್ವದ ತಂಡವು ಶುಕ್ರವಾರ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮತಯಾಚನೆ ನಡೆಸಿದರು. ಪಟ್ಟಣದ ನ್ಯಾಯಾಲಯದ ಸಮೀಪದಲ್ಲಿ ಬಿರುಸಿನ ಮತಯಾಚನೆ ನಡೆಸಿದರು.
ಹಿರಿಯ ವಕೀಲ ಪ್ರಕಾಶ್.ವೈ ಮಾತನಾಡಿ, ಆನೇಕಲ್ನಲ್ಲಿಯೇ ಕಾರ್ಮಿಕ ನ್ಯಾಯಾಲಯವನ್ನು ಸ್ಥಾಪಿಸಲಾಗುವುದು. ಯುವ ವಕೀಲರ ಕೌಶಲ್ಯ ಅಭಿವೃದ್ಧಿಗೆ ಕಾನೂನು ಅಕಾಡೆಮಿ ಸ್ಥಾಪಿಸಲಾಗುವುದು. ನೋಟರಿಗಳಿಗೆ ಸುಸಜ್ಜಿತ ಜಾಗವನ್ನು ಕಲ್ಪಿಸಲಾಗುವುದು. ಗರ್ಭೀಣಿ ಮಹಿಳಾ ವಕೀಲರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕಕೆ ರವೀಶ್ ಕುಮಾರ್, ಖಜಾಂಚಿ ಸ್ಥಾನಕ್ಕೆ ಗೌರಮ್ಮ, ಕಾರ್ಯಕಾರಿ ಸಮಿತಿಗೆ ಮೋಹನ್ ಕುಮಾರ್, ಮೋಹನ್ ಕಾಂತ, ಮುರಳಿ, ಮೂರ್ತಿ ಕುಮಾರ್, ನಾಗರಾಜು, ನಾರಾಯಣಸ್ವಾಮಿ, ಪ್ರವೀಣ್ ಕುಮಾರ್, ರಮೇಶ್, ಶಿವಣ್ಣ, ಉದಯ ಕುಮಾರ್, ವಿಕ್ರಮ್, ಅರುಣ ಕುಮಾರಿ, ನಾಗರತ್ನ, ವೀಣಾ ಅವರು ಸ್ಫರ್ಧಿಸಿದ್ದು, ಮತ ನೀಡುವ ಮೂಲಕ ವಕೀಲರ ಹಿತ ಕಾಲು ಅವಕಾಶ ಕಲ್ಪಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.