ADVERTISEMENT

ಗುಡಿಯಲ್ಲಿ ನವಜಾತ ಶಿಶು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 7:30 IST
Last Updated 26 ನವೆಂಬರ್ 2021, 7:30 IST
ವಿಜಯಪುರದ ಚಿಕ್ಕನಹಳ್ಳಿ ಕೆರೆಯ ಕಟ್ಟೆಯ ಮೇಲಿರುವ ಗಂಗಾತಾಯಿ ದೇವರ ಗುಡಿಯಲ್ಲಿ ಬಿಟ್ಟುಹೋದ ನವಜಾತ ಹೆಣ್ಣು ಶಿಶು
ವಿಜಯಪುರದ ಚಿಕ್ಕನಹಳ್ಳಿ ಕೆರೆಯ ಕಟ್ಟೆಯ ಮೇಲಿರುವ ಗಂಗಾತಾಯಿ ದೇವರ ಗುಡಿಯಲ್ಲಿ ಬಿಟ್ಟುಹೋದ ನವಜಾತ ಹೆಣ್ಣು ಶಿಶು   

ವಿಜಯಪುರ:ಚಿಕ್ಕಬಳ್ಳಾಪುರ ರಸ್ತೆಯ ಚಿಕ್ಕನಹಳ್ಳಿ ಕೆರೆಯ ಕಟ್ಟೆಯ ಗಂಗಾತಾಯಿ ಗುಡಿಯಲ್ಲಿ ಗುರುವಾರ ಬೆಳಗಿನ ಜಾವ ನವಜಾತ ಹೆಣ್ಣು ಶಿಶುವನ್ನು ಬಿಟ್ಟು ಹೋಗಿದ್ದಾರೆ.

ಬಟ್ಟೆಯಲ್ಲಿ ಸುತ್ತಿದ ನವಜಾತ ಶಿಶುವನ್ನುಗುಡಿಯಲ್ಲಿ ದೇವರಮೂರ್ತಿ ಮುಂದೆ ಮಲಗಿಸಿ ಹೋಗಿದ್ದಾರೆ.ಬೆಳಗಿನ ಜಾವ ಮೈ ಕೊರೆಯುವ ಚಳಿಯಲ್ಲಿ ಮಗುವಿನ ಅಳುವನ್ನು ಕೇಳಿ ಜನರು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಸಹಾಯವಾಣಿ ಸಿಬ್ಬಂದಿ ನವಜಾತ ಹೆಣ್ಣು ಶಿಶುವನ್ನು ರಕ್ಷಣೆ ಮಾಡಿ, ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಮಗು ಆರೋಗ್ಯವಾಗಿದ್ದುಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT