ADVERTISEMENT

ದೊಡ್ಡಬಳ್ಳಾಪುರ: ಗಾಳಿ, ಮಳೆಗೆ ಮುರಿದ ಬಾಳೆಗಿಡಗಳು

​ಪ್ರಜಾವಾಣಿ ವಾರ್ತೆ
Published 8 ಮೇ 2019, 13:04 IST
Last Updated 8 ಮೇ 2019, 13:04 IST
ನೆರಳೆಘಟ್ಟ ಗ್ರಾಮದಲ್ಲಿ ಗಾಳಿ, ಮಳೆಗೆ ನೆಲಕಚ್ಚಿರುವ ಬಾಳೆಗಿಡಗಳು
ನೆರಳೆಘಟ್ಟ ಗ್ರಾಮದಲ್ಲಿ ಗಾಳಿ, ಮಳೆಗೆ ನೆಲಕಚ್ಚಿರುವ ಬಾಳೆಗಿಡಗಳು   

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿ ಮಳೆಗೆ ನೆರಳೆಘಟ್ಟ ಗ್ರಾಮದಲ್ಲಿ ಫಸಲಿಗೆ ಬಂದಿದ್ದ ಬಾಳೆಗಿಡಗಳು ಮುರಿದುಬಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

‘ಎರಡೂವರೆ ಎಕರೆ ಪ್ರದೆಶದಲ್ಲಿ ಬೆಳೆದಿದ್ದ ಏಲಕ್ಕಿ ಬಾಳೆ ಗೊನೆಗಳು ಇನ್ನು ಒಂದೆರಡು ತಿಂಗಳಲ್ಲಿ ಕಟಾವು ಮಾಡುವ ಹಂತಕ್ಕೆ ಬೆಳೆದು ನಿಂತಿದ್ದವು. ಬಾಳೆ ಗಿಡ ಬೆಳೆಯಲು ಬ್ಯಾಂಕಿನಿಂದ ₹4 ಲಕ್ಷಗಳಷ್ಟು ಸಾಲ ಮಾಡಲಾಗಿತ್ತು’ ಎಂದು ಆಳಲು ತೋಡಿಕೊಂಡವರು ರೈತ ಬೈರೇಗೌಡ.

‘ಗಾಳಿ, ಮಳೆಗೆ ಇಡೀ ತೋಟದಲ್ಲಿನ ಬಾಳೆಗಿಡಗಳೆಲ್ವು ನೆಲಕ್ಕೆ ಉರುಳಿ ಬಿದ್ದಿವೆ. ‘ಬ್ಯಾಂಕಿನಿಂದ ಪಡೆದಿದ್ದ ಸಾಲದ ಹಣವನ್ನೆಲ್ಲವು ಬಾಳೆಗಿಡ ಬೆಳೆಯಲು ತೊಡಗಿಸಲಾಗಿತ್ತು. ಈಗ ನೋಡಿದರೆ ಕೈಗೆ ಬಂದ ಫಸಲು ನೆಲಕಚ್ಚಿದೆ. ಬ್ಯಾಂಕಿನಿಂದ ಪಡೆದಿರುವ ಸಾಲವನ್ನು ಹೇಗೆ ತೀರಿಸುವುದು ಎನ್ನುವುದೇ ದೊಡ್ಡ ಚಿಂತೆಯಾಗಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.