ADVERTISEMENT

ಮನೆ ದರೋಡೆ ಯತ್ನಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 1:31 IST
Last Updated 7 ಫೆಬ್ರುವರಿ 2021, 1:31 IST
ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಕಳವು ಯತ್ನದ ದೃಶ್ಯ
ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಕಳವು ಯತ್ನದ ದೃಶ್ಯ   

ದೊಡ್ಡಬಳ್ಳಾಪುರ: ನಗರದ ಹೆಚ್ಚು ಜನ ಸಂದಣಿ ಇರುವ ದೇವರಾಜ ನಗರದಲ್ಲಿನ ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ನೇಯ್ಗೆ ಉದ್ಯಮಿ ಕೆ.ಎಂ.ಹನುಮಂತರಾಯಪ್ಪ ಅವರ ಮನೆ ಗೇಟ್‌ ಮುರಿದು ದರೋಡೆಕೋರರು ಒಳ ನುಗ್ಗಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೊದಲಿಗೆ ಮನೆ ಆವರಣದಲ್ಲಿ ನಿಲ್ಲಿಸಲಾಗಿರುವ ಬೈಕ್‌ಗಳನ್ನು ಕಳವು ಮಾಡಲು ಯತ್ನಿಸಿದ್ದಾರೆ. ಆದರೆ, ಎಲ್ಲ ಬೈಕ್‌ಗಳಿಗೂ ಹ್ಯಾಂಡಲ್‌ ಲಾಕ್‌ ಮಾಡಿದ್ದರಿಂದ ಸಾಧ್ಯವಾಗಿಲ್ಲ. ಇನೋವಾ ಕಾರಿನಲ್ಲಿ ಬಂದಿರುವ ಕಳ್ಳರು ಮನೆ ಗೇಟ್‌ ಬಾಗಿನಲ್ಲೇ ಕಾರು ನಿಲ್ಲಿಸಿದ್ದಾರೆ. ಕಾರಿನ ನಂಬರ್‌ ಪ್ಲೇಟ್‌ ಕಾಣಿಸದಂತೆ ಹೂವಿನ ಹಾರ ನೇತುಹಾಕಿದ್ದಾರೆ. ಬಾಗಿಲು ಮುರಿದು ಒಳನುಗ್ಗುವಷ್ಟರಲ್ಲಿ ಇದೇ ರಸ್ತೆಯಲ್ಲಿ ಯಾರೋ ಬಂದಿರುವ ಕಾರಣದಿಂದಾಗಿ ಕಾರು ಹತ್ತಿ ಪರಾರಿಯಾಗಿದ್ದಾರೆ.

ಕಾರು ರಸ್ತೆಯಲ್ಲಿ ಹೋಗುತ್ತಿರುವ ದೃಶ್ಯ ಇದೇ ರಸ್ತೆ ಇತರ ಮನೆಗಳ ಮುಂದೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರದಲ್ಲೂ ಸೆರೆಯಾಗಿದೆ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.