ADVERTISEMENT

ದೊಡ್ಡಬಳ್ಳಾಪುರ | ಟೋಲ್‌ ಸಿಬ್ಬಂದಿ ಎಡವಟ್ಟು; ಸರಣಿ ಅಪಘಾತ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 15:43 IST
Last Updated 18 ಆಗಸ್ಟ್ 2024, 15:43 IST
ದೊಡ್ಡಬಳ್ಳಾಪುರ–ಬೆಂಗಳೂರು ರಾಜ್ಯ ಹೆದ್ದಾರಿಯ ಬಾಶೆಟ್ಟಿಹಳ್ಳಿ ಮೇಲು ಸೇತುವೆಯಲ್ಲಿ ಭಾನುವಾರ ನಡೆದ ಸರಣಿ ಅಪಘಾತದಲ್ಲಿ ಜಖಂ ಆಗಿರುವ ಕಾರು
ದೊಡ್ಡಬಳ್ಳಾಪುರ–ಬೆಂಗಳೂರು ರಾಜ್ಯ ಹೆದ್ದಾರಿಯ ಬಾಶೆಟ್ಟಿಹಳ್ಳಿ ಮೇಲು ಸೇತುವೆಯಲ್ಲಿ ಭಾನುವಾರ ನಡೆದ ಸರಣಿ ಅಪಘಾತದಲ್ಲಿ ಜಖಂ ಆಗಿರುವ ಕಾರು   

ದೊಡ್ಡಬಳ್ಳಾಪುರ: ಟೋಲ್ ಸಿಬ್ಬಂದಿ ಎಡವಟ್ಟಿನಿಂದಾಗಿ ಬೆಂಗಳೂರು ರಾಜ್ಯ ಹೆದ್ದಾರಿಯ ಬಾಶೆಟ್ಟಿಹಳ್ಳಿ ರೈಲ್ವೆ ಮೇಲು ಸೇತುವೆಯಲ್ಲಿ ಸರಣಿ ಅಪಘಾತ ನಡೆದಿದೆ.

ಭಾನುವಾರ ಬೆಳಗ್ಗೆ ಮುಂಜಾಗ್ರತೆ  ಕ್ರಮ ಕೈಗೊಳ್ಳದೆ ಟೋಲ್‌ ಸಿಬ್ಬಂದಿ ಸೇತುವೆ ಮೇಲೆ ಟೆಂಪೊ ನಿಲ್ಲಿಸಿಕೊಂಡು ರಸ್ತೆ ಬದಿ ಸಿಮೆಂಟ್ ಹಾಕುವ ಕಾಮಗಾರಿ ನಡೆಸುತ್ತಿದ್ದರು. ಈ ವೇಳೆ ತಿರುವಿನಲ್ಲಿ ಟೆಂಪೊ ನಿಂತಿರುವುದು ಕಾಣದೆ ಬೆಂಗಳೂರು ಕಡೆಯಿಂದ ಬಂದ ಕಾರು ದಿಢೀರನೆ ಬ್ರೆಕ್ ಹಾಕಿದ ಪರಿಣಾಮ ಸುಮಾರು ಐದಕ್ಕೂ ಹೆಚ್ಚಿನ ಕಾರುಗಳು ಸರಣಿ ಅಪಘಾತಕ್ಕೆ ಒಳಗಾಗಿವೆ.

ಕಾಮಗಾರಿಗೂ ಮುನ್ನ ಬ್ಯಾರಿಕೇಟ್ ಮತ್ತು ಸೂಚನೆ ಫಲಕ ಅಳವಡಿಸದೆ ಕಾಮಗಾರಿ ನಡೆಸಿದ್ದರಿಂದ ಸರಣಿ ಅಪಘಾತವಾಗಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಅಪಘಾತದಿಂದ ಹೆದ್ದಾರಿಯಲ್ಲಿ ಒಂದು ಗಂಟೆಗೂ ಹೆಚ್ಚಿನ ಸಮಯ ವಾಹನ ದಟ್ಟಣೆ ಉಂಟಾಗಿತ್ತು.

ದೊಡ್ಡಬಳ್ಳಾಪುರ ಬೆಂಗಳೂರು ರಾಜ್ಯ ಹೆದ್ದಾರಿಯ ಬಾಶೆಟ್ಟಿಹಳ್ಳಿ ಮೇಲು ಸೇತುವೆಯಲ್ಲಿ ಭಾನುವಾರ ನಡೆದ ಸರಣಿ ಅಪಘಾತದದಿಂದಾಗಿ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.