ಹೊಸಕೋಟೆ: ಚಿಕ್ಕಹುಲ್ಲೂರಿನಲ್ಲಿ ಎಚ್ಆರ್ಎಸ್ವಿ ಸಮಿತಿ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಈದ್ ಮಿಲಾದ್ ಹಬ್ಬವನ್ನು ಹಿಂದೂ–ಮುಸ್ಲಿಮರು ಒಗ್ಗೂಡಿ ಆಚರಿಸಲಾಯಿತು.
‘ಚಿಕ್ಕಹುಲ್ಲೂರಿನಲ್ಲಿ ಈದ್ ಮಿಲಾದ್ ಹಬ್ಬವನ್ನು ಭಾವೈಕ್ಯತೆಯಿಂದ ಎಲ್ಲಾ ಪಂಥದವರು ಸೇರಿ ಆಚರಿಸುತ್ತಿದ್ದೇವೆ’ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಜೆ. ಬಚ್ಚೇಗೌಡ ತಿಳಿಸಿದರು.
ಅಲ್ಪ ಸಂಖ್ಯಾತ ಮುಖಂಡ ಷಫಿವುಲ್ಲಾ, ಮುಹಮ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ಆಚರಿಸುವ ಈದ್ ಮಿಲಾದ್ ಮಹತ್ವವನ್ನು ತಿಳಿಸಿದರು.
ಚಂದ್ರಶೇಖರ್, ರಾಮೇಗೌಡ, ಕುಮಾರ್, ಲೋಕೇಶ್ ಸಂತೋಷ್ , ಮಸೀದಿ ಗುರುಗಳಾದ ಹಜರತ್ ಅಮೀರ್ ಜಾನ್, ಬಕಾಶ್, ಸೈಯದ್ ಮೌಲಾ, ಇಬ್ರಾಹಿಂ, ಅಲೀಂ, ಸೈಯದ್ ಬಾಬು, ಸೈಯದ್ ಸಲಾಂ ಅಮೀರ್ ಜಾನ್ , ಎಸ್ಕೆಆರ್ ಸಿಕಂದರ್, ನಾಸೀರ್, ಜಮೀರ್, ಅಸ್ಲಂ, ಬಿ.ಎಲ್. ರಿಯಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.