ದೇವನಹಳ್ಳಿ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದುಬೈಗೆ ಸಾಗಣೆ ಮಾಡಲು ಯತ್ನಿಸಿದ್ದ ₹6ಕೋಟಿ ಬೆಲೆ ಬಾಳುವ ರಕ್ತಚಂದನವನ್ನು ಕೆಲವು ಪೈಪ್ಗಳಲ್ಲಿ ಪಾರ್ಸೆಲ್ ಮಾಡಿ ಕಳುಹಿಸುತ್ತಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿ, ಪರಿಶೀಲನಾ ಸಮಯದಲ್ಲಿ ವಶಪಡಿಸಿಕೊಂಡಿದ್ದಾರೆ.
ರಕ್ತಚಂದನವನ್ನು ಪೈಪ್ಗಳಲ್ಲಿ ಪಾರ್ಸೆಲ್ ಮಾಡಿ ದುಬೈಗೆ ಸಾಗಿಸಲು ಹುನ್ನಾರ ನಡೆಸಿದ್ದರು.ಅಕ್ರಮವಾಗಿ ನಿಷೇಧಿತ ರಕ್ತಚಂದನ ರವಾನೆ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.