ADVERTISEMENT

ವಿಧಾನಸಭಾ ಚುನಾವಣೆ | ಅನ್ಯ ಕ್ಷೇತ್ರಗಳಲ್ಲಿ ಆನೇಕಲ್‌ನ ನಾಲ್ವರು ರಾಜಕಾರಣಿಗಳು

​ಪ್ರಜಾವಾಣಿ ವಾರ್ತೆ
Published 10 ಮೇ 2023, 3:07 IST
Last Updated 10 ಮೇ 2023, 3:07 IST
ದೊಡ್ಡಯ್ಯ, ರೋಣ ಎಎಪಿ ಅಭ್ಯರ್ಥಿ
ದೊಡ್ಡಯ್ಯ, ರೋಣ ಎಎಪಿ ಅಭ್ಯರ್ಥಿ   

ಆನೇಕಲ್: ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಆನೇಕಲ್ ತಾಲ್ಲೂಕಿನ ನಾಲ್ವರು ರಾಜ್ಯದ ಬೇರೆ ಬೇರೆ ಕಡೆ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. 

ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದಿಂದ ಆನೇಕಲ್‌ನ ದೊಡ್ಡಯ್ಯ ಅವರು ಎಎಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ.

ಬಾಗೇಪಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತಾಲ್ಲೂಕಿನ ಸರ್ಜಾಪುರದ ಸಿ. ಮುನಿರಾಜು ಸ್ಪರ್ಧೆಯಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ತಾಲ್ಲೂಕಿನ ಜಿಗಣಿಯ ಕೃಷ್ಣಪ್ಪ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಜಿಗಣಿಯ ಮುರಳಿ ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿದಿದ್ದಾರೆ.

ADVERTISEMENT

ರೋಣ ಕ್ಷೇತ್ರದ ಎಎಪಿ ಅಭ್ಯರ್ಥಿ ಆನೇಕಲ್‌ ದೊಡ್ಡಯ್ಯ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಕಾರ್ಯಾಧ್ಯಕ್ಷರಾಗಿದ್ದರು. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಸಿ. ಮುನಿರಾಜು ಪ್ರಸ್ತುತ ಎಸ್‌ಟಿಆರ್‌ಆರ್‌ ಅಧ್ಯಕ್ಷರಾಗಿದ್ದಾರೆ. ಜಿಗಣಿಯ ಜಿ.ಕೃಷ್ಣಪ್ಪ ಯುವ ಕಾಂಗ್ರೆಸ್‌, ಕೆಪಿಸಿಸಿ ಸದಸ್ಯರಾಗಿ ಕಾರ್ಯನಿರ್ವಹಿಸಿ ಅದೃಷ್ಟ ಪರೀಕ್ಷೆಗಾಗಿ ಸುಳ್ಯ ಕ್ಷೇತ್ರದತ್ತ ತೆರಳಿದ್ದಾರೆ. ಐದಾರು ವರ್ಷಗಳಿಂದ ಸಕಲೇಶಪುರದಲ್ಲಿ ಸಂಘಟನೆಯಲ್ಲಿ ತೊಡಗಿದ್ದ ಜಿಗಣಿಯ ಮುರಳಿ ಸಕಲೇಶಪುರ ಕಾಂಗ್ರೆಸ್‌
ಅಭ್ಯರ್ಥಿಯಾಗಿದ್ದಾರೆ.

ಸಿ.ಮುನಿರಾಜು ಬಾಗೇಪಲ್ಲಿ ಬಿಜೆಪಿ ಅಭ್ಯರ್ಥಿ
ಮುರಳಿ ಸಕಲೇಶಪುರ ಕಾಂಗ್ರೆಸ್ ಅಭ್ಯರ್ಥಿ
ಜಿ.ಕೃಷ್ಣಪ್ಪ ಸುಳ್ಯ ಕಾಂಗ್ರೆಸ್ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.