ADVERTISEMENT

ಆನೇಕಲ್: ಕಾರ್ತಿಕ ಮಾಸದ ಕಡೆ ಸೋಮವಾರ; ಶಿವ ದೇವಾಲಯದಲ್ಲಿ ಬೆಳಗಿದ ದೀಪ ಆರತಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 3:06 IST
Last Updated 18 ನವೆಂಬರ್ 2025, 3:06 IST
ಚಿಕ್ಕಹೊಸಹಳ್ಳಿಯ ಮಹದೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ
ಚಿಕ್ಕಹೊಸಹಳ್ಳಿಯ ಮಹದೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ   

ಆನೇಕಲ್: ತಾಲ್ಲೂಕಿನ ಶಿವ ದೇವಾಲಯದಲ್ಲಿ ಕಾರ್ತಿಕ ಮಾಸದ ಕಡೆ ಸೋಮವಾರ ಪ್ರಯುಕ್ತ ವಿಶೇಷ ಪೂಜೆ, ದೇವಾಲಯಗಳಲ್ಲಿ ಮಹಿಳೆಯರು ದೀಪ ಹೊತ್ತಿಸಿ ಆರತಿ ಬೆಳಗಿದರು.

ಪಟ್ಟಣದ ಕಂಬದ ಗಣಪತಿ ದೇವಾಲಯದ ಅಮೃತ ಮಲ್ಲಿಕಾರ್ಜುನ ಸ್ವಾಮಿ, ಥಳೀ ರಸ್ತೆಯ ಬಸವೇಶ್ವರ, ಗೆರಟಿಗನಬೆಲೆ ಪವಾಡ ಬಸವೇಶ್ವರ, ಮಾಸ್ತೇನಹಳ್ಳಿ ವೀರಭದ್ರಸ್ವಾಮಿ, ಚಿಕ್ಕಹೊಸಹಳ್ಳಿಯ ಕಾಶಿ ವಿಶ್ವನಾಥ ಸ್ವಾಮಿ, ಬಯಲು ಬಸವೇಶ್ವರ ಸ್ವಾಮಿ, ಹಳೇಹಳ್ಳಿಯ ಮುನೇಶ್ವರ ಸ್ವಾಮಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಧಾರ್ಮಿಕ ಕೈಂಕರ್ಯಗಳು ನೆಡೆದವು.

ತಾಲ್ಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹೊಸಹಳ್ಳಿಯ ಕಾಶಿವಿಶ್ವನಾಥ ಸ್ವಾಮಿ ದೇಗುಲಗಳಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಜೆ ದೇವಾಲಯದಲ್ಲಿ ದೀಪೋತ್ಸವ ನಡೆಯಿತು.

ADVERTISEMENT

ತಮ್ಮನಾಯಕನಹಳ್ಳಿಯ ದಬ್ಬಗೂಳೇಶ್ವರ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ಬೆಳಗಿನಿಂದ ಸಂಜೆಯವರೆಗೂ ಅನ್ನದಾಸೋಹ ಏರ್ಪಡಿಸಲಾಗಿತ್ತು. ಕಾರ್ತಿಕ ಸೋಮವಾರದ ಪ್ರಯುಕ್ತ ಪಟ್ಟಣದಿಂದ ತಟ್ಟೆಕೆರೆಗೆ ಉಚಿತ ಬಸ್‌ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯಗಳಲ್ಲಿ ಭಕ್ತರು ದಂಡು ಹೆಚ್ಚಾಗಿತ್ತು.

ಮಾಸ್ತೇನಹಳ್ಳಿಯ ವೀರಭದ್ರಸ್ವಾಮಿಯ ಅಲಂಕೃತ ಮೂರ್ತಿ
ಕಾರ್ತೀಕ ಮಾಸದ ಕಡೆ ಸೋಮವಾರ ಪ್ರಯುಕ್ತ ಕಾಶಿ ವಿಶ್ವನಾಥನಿಗೆ ಅಲಂಕಾರ
ತಮ್ಮನಾಯಕನಹಳ್ಳಿಯ ದಬ್ಬಗೂಳೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.