ADVERTISEMENT

ಗಿರೀಶ್‌ಗೆ ‘ಕಾಯಕಲ್ಪ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 2:12 IST
Last Updated 19 ಸೆಪ್ಟೆಂಬರ್ 2020, 2:12 IST
ಚನ್ನಪಟ್ಟಣದ ಗಿರೀಶ್ ಅವರು ಕಾಯಕಲ್ಪ ಪ್ರಶಸ್ತಿ ಸ್ವೀಕರಿಸಿದರು
ಚನ್ನಪಟ್ಟಣದ ಗಿರೀಶ್ ಅವರು ಕಾಯಕಲ್ಪ ಪ್ರಶಸ್ತಿ ಸ್ವೀಕರಿಸಿದರು   

ಚನ್ನಪಟ್ಟಣ: ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ಚನ್ನಪಟ್ಟಣದ ಗಿರೀಶ್ ಅವರಿಗೆ 2018-19ನೇ ಸಾಲಿನಲ್ಲಿ ಆಸ್ಪತ್ರೆ ವತಿಯಿಂದ ನೀಡುವ ಕಾಯಕಲ್ಪ ಪ್ರಶಸ್ತಿ ದೊರೆತಿದೆ.

ಸರ್ಕಾರಿ ಅಸ್ಪತ್ರೆಗಳ ಸಮಗ್ರ ನಿರ್ವಹಣೆ, ಸ್ವಚ್ಛತೆ, ಔಷಧಗಳ ಲಭ್ಯತೆ, ಗುಣಮಟ್ಟದ ಚಿಕಿತ್ಸಾ ವಿಧಾನ, ರೋಗಿಗಳೊಂದಿಗೆ ಸಂವಹನ ಸಂಬಂಧ ಹಾಗೂ ನಗುಮೊಗದ ಸೇವೆ, ಸಕಾಲಕ್ಕೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸೇವೆ ಲಭ್ಯತೆ ಸೇರಿದಂತೆ ಒಟ್ಟಾರೆ ಆಸ್ಪತ್ರೆಯಲ್ಲಿ ಎಲ್ಲ ಕಾರ್ಯಕ್ಷಮತೆ ಸಮೀಕ್ಷೆ ನಡೆಸಿ ಆಯ್ಕೆ ಮಾಡುವ ’ಕಾಯಕಲ್ಪ’ ಪ್ರಶಸ್ತಿಗೆ ಗಿರೀಶ್ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT