ಅನಗೊಂಡನಹಳ್ಳಿ(ಹೊಸಕೋಟೆ): ಒತ್ತುವರಿ ಕಾಟ, ಕೆರೆ ಅಂಗಳದಲ್ಲೇ ಕಸ ವಿಲೇವಾರಿ, ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ...
–ಇವುಗಳಿಂದ ಹೊಸಕೋಟೆ ತಾಲ್ಲೂಕಿನ ಅನಗೊಂಡನಹಳ್ಳಿ ಹೋಬಳಿಯ ಸಮೇತನಹಳ್ಳಿ ಪಂಚಾಯಿತಿ ವ್ಯಾಪ್ತಿ ವ್ಯಾಪ್ತಿಯ ಕೆ.ಮಲ್ಲಸಂದ್ರದ ಕೆರೆ ನಲುಗಿ ಹೋಗಿದ್ದು, ಜೀವನಾಡಿಯ ಅಸ್ತಿತ್ವಕ್ಕೆ ಕುತ್ತು ಬಂದಿದೆ.
ಒತ್ತುವರಿ ಹಾವಳಿ ಒಂದೆಡೆಯಾದರೆ ಕೆರೆ ಅಂಗಳದಲ್ಲಿ ಗಿಡಗೆಂಟಿ ಬೆಳೆದು ಕೆರೆ ಸ್ವರೂಪವೇ ಹಾಳಾಗಿದೆ. ಕೆರೆ ನೀರು ಹಸಿರು ಬಣ್ಣಕ್ಕೆ ತಿರುಗಿ ದುರ್ನಾತ ಬೀರುತ್ತಿದೆ. ಕೆರೆ ಏರಿ ಮೇಲೆ ಕಸ ಸುರಿಯುವುದರಿಂದ ಆ ಕಸವೆಲ್ಲ ಕೆರೆ ನೀರಿಗೆ ಸೇರು ಕೊಳೆಯುತ್ತಿದ್ದು, ಸಂಪೂರ್ಣವಾಗಿ ಕುಲುಷಿತವಾಗಿದೆ. ಒಂದು ಕಾಲದಲ್ಲಿ ಈ ಭಾಗದ ಜೀವನಾಡಿಯಾಗಿದ್ದ ಕೆರೆ ಈಗ ಅವಸಾನದತ್ತ ಮುಖ ಮಾಡಿದೆ.
ಭಕ್ತರಹಳ್ಳಿ ರಸ್ತೆಗೆ ಹೊಂದಿಕೊಂಡ ಮತ್ತು ಕೆರೆ ಕೊಡಿಯ ಭಾಗ ಒತ್ತುವರಿಯಾಗಿತ್ತಿದೆ. ಬಿಲ್ಡರ್, ರಿಯಲ್ ಎಸ್ಟೇಟ್ ದಂಧೆಕೋರರ ಹಾವಳಿಗೆ ತುತ್ತಾಗಿ ವಿಲ್ಲಾ, ಅಪಾರ್ಟ್ಮೆಂಟ್, ಖಾಸಗಿ ಕಂಪನಿಗಳು ತಲೆ ಎತ್ತುತ್ತಿದ್ದರು. ನೋಡಿಯೂ ನೋಡದಂತೆ ಅಧಿಕಾರಿಗಳು ಜಾನ ಕುರುಡತನ ಪ್ರದರ್ಶಿಸುತ್ತಿದ್ದಾರೆ.
ಮಲ್ಲಸಂದ್ರ ಗ್ರಾಮದ ಪ್ಲಾಸ್ಟಿಕ್, ಕಸ ಮತ್ತು ಚರಂಡಿ ನೀರು ಕೆರೆ ಸೇರುತ್ತಿದೆ. ಇದರಿಂದ ಇಡೀ ಕೆರೆಯೇ ಗಬ್ಬು ನಾರುತ್ತಿದೆ. ಕೆರೆಯ ದಂಡೆ, ಅಂಗಳ, ಕೊಡಿ ಹೀಗೆ ಎಲ್ಲಿ ನೋಡಿದರೂ ಗಲೀಜು ಆವರಿಸಿದೆ. ಇದರಿಂದ ಕೆರೆ ನೀರು ಮಾಲಿನ್ಯವಾಗಿ, ಅಂತರ್ಜಲವು ಕಲುಷಿತಗೊಂಡಿದೆ.
ಕೆರೆ ಹೂಳು ತೆಗೆದು ದಶಕಗಳೇ ಕಳೆದಿದೆ. ಇದರಿಂದ ಹೂಳು ತುಂಬಿಕೊಂಡು, ಗಿಡಗೆಂಟಿ ಬೆಳೆದು ಕೆರೆ ಒಳಗೆ ಪಾಚಿ ಬೆಳೆದಿದೆ. ಇದರಿಂದ ಕೆರೆ ಅಸ್ತಿತ್ವಕ್ಕೆ ಧಕ್ಕೆಯಾಗಿದೆ.
ಮಲ್ಲಸಂದ್ರ ಕೆರೆ ಉಳಿಸಿ ಎಂದು ಬೇಡಿಕೊಂಡರು ಯಾವ ರಾಜಕೀಯ ನಾಯಕರು ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಹೀಗಾಗಿ ಅವರಿಗೆ ಕೆರೆಯ ಸ್ಥಿತಿಗತಿ ಹೇಗಿದೆ ಎಂಬುದು ತಿಳಿಯುತ್ತಿಲ್ಲಸಮೇತನಹಳ್ಳಿ ರಾಮಚಂದ್ರ, ರೈತ ಮುಖಂಡ
ತಹಶೀಲ್ದಾರ್ ಅವರು ಒತ್ತುವರಿಯಾಗಿರುವ ಕೆರೆ ಜಾಗ ತೆರವುಗೊಳಿಸಿ ಕೆರೆಯ ಸುತ್ತಲೂ ಬೆಲಿ ಹಾಕಿಸಬೇಕು. ಕೆರೆ ಆವರಣದಲ್ಲಿ ಕಸ ಸುರಿಯುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು.ಎಂ.ಮುನಿರಾಜು, ಕಾರ್ಯದರ್ಶಿ ದಲಿತ ಹಕ್ಕುಗಳ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.