ಹೊಸಕೋಟೆ: ಇಲ್ಲಿನ ದೇವನಗುಂದಿಯಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ನ ಆಯಿಲ್ ಡಿಪೋದಲ್ಲಿ ಲಾರಿ ಚಾಲಕರು ಶುಕ್ರವಾರ ಮುಷ್ಕರ ನಡೆಸಿದರು.
ಮುಷ್ಕರನಿರತ ಚಾಲಕರು ಮಾತನಾಡಿ, ‘ಕಂಪನಿಯವರು ನಮ್ಮ ಸಮಸ್ಯೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಾಗಾಣಿಕೆಯಲ್ಲಿ ಆಗುವ ಇಂಧನ ಸೋರಿಕೆಯನ್ನು ಭರಿಸುವಂತೆ ತಿಳಿಸುತ್ತಾರೆ’ ಎಂದು ದೂರಿದರು.
ಇನ್ನೂ ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸುತ್ತಿರುವುದಾಗಿ ತಿಳಿಸಿದರು. ಇದರ ಪರಿಣಾಮವಾಗಿ ಯಾವುದೇ ಲಾರಿಗಳು ರಸ್ತೆಗೆ ಇಳಿಯಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.