ADVERTISEMENT

ದೇವನಗುಂದಿಯಲ್ಲಿ ಲಾರಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 14:38 IST
Last Updated 5 ಜುಲೈ 2019, 14:38 IST
ಹೊಸಕೋಟೆಯ ದೇವನಗುಂದಿಯಲ್ಲಿರುವ ಇಂಡಿಯನ್ ಆಯಿಲ್ ಕಾರ್ಪರೇಷನ್ನ ಆಯಿಲ್ ಡಿಪೋದಲ್ಲಿ ಲಾರಿ ಚಾಲಕರು ಮುಷ್ಕರ ನಡೆಸಿದ ಪರಿಣಾಮವಾಗಿ ಇಂದು ಯಾವುದೇ ಲಾರಿಗಳು ರಸ್ತೆಗೆ ಇಳಿಯಲಿಲ್ಲ.
ಹೊಸಕೋಟೆಯ ದೇವನಗುಂದಿಯಲ್ಲಿರುವ ಇಂಡಿಯನ್ ಆಯಿಲ್ ಕಾರ್ಪರೇಷನ್ನ ಆಯಿಲ್ ಡಿಪೋದಲ್ಲಿ ಲಾರಿ ಚಾಲಕರು ಮುಷ್ಕರ ನಡೆಸಿದ ಪರಿಣಾಮವಾಗಿ ಇಂದು ಯಾವುದೇ ಲಾರಿಗಳು ರಸ್ತೆಗೆ ಇಳಿಯಲಿಲ್ಲ.   

ಹೊಸಕೋಟೆ: ಇಲ್ಲಿನ ದೇವನಗುಂದಿಯಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಆಯಿಲ್ ಡಿಪೋದಲ್ಲಿ ಲಾರಿ ಚಾಲಕರು ಶುಕ್ರವಾರ ಮುಷ್ಕರ ನಡೆಸಿದರು.

ಮುಷ್ಕರನಿರತ ಚಾಲಕರು ಮಾತನಾಡಿ, ‘ಕಂಪನಿಯವರು ನಮ್ಮ ಸಮಸ್ಯೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಾಗಾಣಿಕೆಯಲ್ಲಿ ಆಗುವ ಇಂಧನ ಸೋರಿಕೆಯನ್ನು ಭರಿಸುವಂತೆ ತಿಳಿಸುತ್ತಾರೆ’ ಎಂದು ದೂರಿದರು.

ಇನ್ನೂ ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸುತ್ತಿರುವುದಾಗಿ ತಿಳಿಸಿದರು. ಇದರ ಪರಿಣಾಮವಾಗಿ ಯಾವುದೇ ಲಾರಿಗಳು ರಸ್ತೆಗೆ ಇಳಿಯಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.