ADVERTISEMENT

ಎಂಟಿಬಿ ಸುಳ್ಳುಗಾರ, ಮೋಸಗಾರ: ಸಹೋದರ ಪಿಳ್ಳಣ್ಣ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 9:55 IST
Last Updated 17 ನವೆಂಬರ್ 2019, 9:55 IST
ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಅಣ್ಣ ಪಿಳ್ಳಣ್ಣ ಸುದ್ದಿಗಾರರೊಂದಿಗೆ ಮಾತನಾಡಿದರು
ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಅಣ್ಣ ಪಿಳ್ಳಣ್ಣ ಸುದ್ದಿಗಾರರೊಂದಿಗೆ ಮಾತನಾಡಿದರು   

ಹೊಸಕೋಟೆ: ‘ಎಂಟಿಬಿ ನಾಗರಾಜ್ ಜನರನ್ನು ನಂಬಿಸಿ ಕೆಲಸವಾದಮೇಲೆ ಕೈ ಬಿಡುತ್ತಾರೆ. ಅವರು ಬಾಯಿ ಬಿಟ್ಟರೆ ಕೇವಲ ಸುಳ್ಳೇ ಬರುತ್ತದೆ’ ಎಂದು ಅವರ ಅಣ್ಣ ಪಿಳ್ಳಣ್ಣ ಆರೋಪಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ನಾಮಪತ್ರ ಸಲ್ಲಿಕೆ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ನಾನು ಸಹ 50 ವರ್ಷ ರಾಜಕೀಯ ಮಾಡಿಯೇ ಬಂದಿರುವವನು. ಅವನಿಗೆ ಒಳ್ಳೆಯದನ್ನು ಮಾಡಿದವರಿಗೆ ಅವನು ಬೈಯ್ಯುತ್ತಾನೆ. ಸಿದ್ದರಾಮಯ್ಯನವರ ಹತ್ತಿರ ನನ್ನ ಬಗ್ಗೆ ಹೇಳಿ ನನ್ನ ಅಧಿಕಾರ ಕಿತ್ತುಹಾಕಿಸಿದ್ದು ಎಂಟಿಬಿ ನಾಗರಾಜ್’ ಎಂದು ದೂರಿದರು.

ADVERTISEMENT

‘ನಾನು ಅವನಿಗೆ ತಂದೆಯ ಸಮಾನ. ನನಗೆ ಮೋಸ ಮಾಡಿದ್ದಾನೆ. ತಾಲ್ಲೂಕಿನ ಅಭಿವೃದ್ಧಿಗೆ ಸಿದ್ದರಾಮಯ್ಯ ಕೊಟ್ಟ ಅನುದಾನದ ಹಣವೇ ಹೊರತು ಅವರ ಮನೆಯಿಂದ ಹಣ ತಂದು ತಾಲ್ಲೂಕಿನ ಅಭಿವೃದ್ಧಿ ಮಾಡಿಲ್ಲ. ಬೇಕಿದ್ದರೆ ದೇವರ ಮುಂದೆ ಬರಲಿ, ಅವನು ಮಾಡಿರುವ ಮೋಸಗಳನ್ನು ಹೇಳುತ್ತೇನೆ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.