ADVERTISEMENT

‘ಕುಡಿಯುವ ನೀರು, ಪರಿಸರ ಸಂರಕ್ಷಣೆ ಮಾಡಿ’

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 13:34 IST
Last Updated 9 ಸೆಪ್ಟೆಂಬರ್ 2019, 13:34 IST
ವಿಜಯಪುರದ ಸಾರಿಗೆ ಕಚೇರಿ ಬಳಿ ಸೇವಾ ಭಾರತಿ ತಂಡದ ಸದಸ್ಯರೊಂದಿಗೆ ಸಾರ್ವಜನಿಕರು 
ವಿಜಯಪುರದ ಸಾರಿಗೆ ಕಚೇರಿ ಬಳಿ ಸೇವಾ ಭಾರತಿ ತಂಡದ ಸದಸ್ಯರೊಂದಿಗೆ ಸಾರ್ವಜನಿಕರು    

ವಿಜಯಪುರ: ಒಂದೊಂದು ಹನಿ ನೀರಿಗೂ ಪರದಾಡುತ್ತಿರುವ ದಿನಗಳಲ್ಲಿ ಇಲ್ಲಿನ ಸೇವಾಭಾರತಿ ತಂಡ ಸಾರ್ವಜನಿಕ ಸ್ಥಳ ಮತ್ತು ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಕುಡಿಯುವ ನೀರು ಒದಗಿಸುವ ಕೆಲಸ ಮಾಡುತ್ತಿದೆ.

ಇಲ್ಲಿನ ಪುರಸಭೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲೂ ಶ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಂಸ್ಥೆ ನೀರು ಒದಗಿಸುತ್ತಿರುವುದು ಜನರ ಮೆಚ್ಚುಗೆ ಪಾತ್ರವಾಗಿದೆ.

ಸ್ಥಳೀಯ ನಿವಾಸಿ ಆಜಾದ್ ಮಾತನಾಡಿ, ಜನರ ಮೂಲ ಅಗತ್ಯಗಳಲ್ಲಿ ನೀರು ಪ್ರಮುಖವಾಗಿದೆ. ನಗರದಲ್ಲಿ ಸಾಕಷ್ಟು ಕುಡಿಯುವ ನೀರಿನ ಸಮಸ್ಯೆ ಇದೆ. ಹಾಗಾಗಿ ನಾಲ್ಕು ತಿಂಗಳಿನಿಂದ ಸೇವಾ ಭಾರತಿ ಯುವಕರ ತಂಡದ ಸದಸ್ಯರು ತಮ್ಮ ಸ್ವತಂ ಖರ್ಚಿನಲ್ಲಿ ನೀರು ಪೂರೈಕೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ADVERTISEMENT

ಕುಡಿಯುವ ನೀರು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಹಗಲಿರುಳು ಶ್ರಮಿಸುತ್ತಿದೆ ಎಂದು ತಂಡದ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.