
ರಾಗಿ ಬೆಳೆ
ದೇವನಹಳ್ಳಿ: ಜಿಲ್ಲೆಯಲ್ಲಿ 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ನೋಂದಣಿಗೆ ಡಿ.15 ಕೊನೆಯ ದಿನ. ಇನ್ನೂ ನೋಂದಣಿ ಯಾಗದಿರುವ ರೈತರು ಆದಷ್ಟು ಬೇಗ ಹತ್ತಿರದ ಖರೀದಿ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.
ಈಗಾಗಲೇ ರಾಗಿ ಬೆಳೆದಿರುವ ರೈತರಿಂದ ನಿಯಮಾನುಸಾರ ಅಗತ್ಯ ದಾಖಲೆ ಪಡೆದುಕೊಂಡು ನೋಂದಣಿ ಆರಂಭಿಸಲಾಗಿದೆ.
ಖರೀದಿ ಕೇಂದ್ರ
ದೊಡ್ಡಬಳ್ಳಾಪುರ ತಾಲ್ಲೂಕು
ರೈತ ಭವನ ಕೇಂದ್ರ, ಎ.ಪಿ.ಎಂ.ಸಿ ಯಾರ್ಡ್.
ರೈತ ಸಂಪರ್ಕ ಕೇಂದ್ರ, ಸಾಸಲು ಹೋಬಳಿ.
ದೇವನಹಳ್ಳಿ ತಾಲ್ಲೂಕು
ಕೆ.ಎಫ್.ಸಿ.ಎಸ್.ಸಿ ಎಂ.ಡಿ.ಎಂ ಗೋದಾಮು, ಕುರುಬರ ದೊಡ್ಡಿ ರಸ್ತೆ.
ನೆಲಮಂಗಲ ತಾಲ್ಲೂಕು
ಕೆಎಫ್ಸಿಎಸ್ಸಿ ಎಂಡಿಎಂ ಗೋದಾಮು ಕೆಂಪಲಿಂಗನಹಳ್ಳಿ ಕ್ರಾಸ್ ಕುಣಿಗಲ್ ರಸ್ತೆ
ವಿಎಸ್ಎಸ್ಎನ್ ಕಳಲುಘಟ್ಟ ರೈತ ಕೇಂದ್ರ, ತ್ಯಾಮಗೊಂಡ್ಲು ಹೋಬಳಿ
ವಿಎಸ್ಎಸ್ಎನ್ ರೈತ ಕೇಂದ್ರ ಸೋಂಪುರ ಹೋಬಳಿ
ಹೊಸಕೋಟೆ ತಾಲ್ಲೂಕು
ಕೆಎಫ್ಸಿಎಸ್ಸಿ ಎಂಡಿಎಂ ಗೋದಾಮು, ವೀರಭದ್ರೇಶ್ವರ ರೈಸ್ ಮಿಲ್ ಕಾಂಪೌಂಡ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.