ADVERTISEMENT

ದೊಡ್ಡಬಳ್ಳಾಪುರ: ಬಿಸಿಲಿನ ಬೇಗೆ ದೂರ ಮಾಡಿದ ಮಳೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 3:23 IST
Last Updated 15 ಏಪ್ರಿಲ್ 2021, 3:23 IST
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಬುಧವಾರ ಸಂಜೆ ತಂಪೆರೆದ ಮಳೆ
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಬುಧವಾರ ಸಂಜೆ ತಂಪೆರೆದ ಮಳೆ   

ದೊಡ್ಡಬಳ್ಳಾಪುರ: ಡಿಸೆಂಬಂರ್‌ ನಂತರ ಇದೆ ಪ್ರಥಮ ಬಾರಿಗೆ ತಾಲ್ಲೂಕಿನ ವಿವಿಧೆಡೆಗಳಲ್ಲಿ ಬುಧವಾರ ಸಂಜೆ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ತಂಪನೆಯ ವಾತಾವರಣ ಉಂಟಾಗಿದೆ.

ಸಂಜೆ 4 ಗಂಟೆಯಿಂದ ಆರಂಭವಾದ ಮಳೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಬಿದ್ದಿದೆ. ಯುಗಾದಿ ಹಬ್ಬದ ನಂತರ ಸಾಮಾನ್ಯವಾಗಿ ಭರಣಿ ಮಳೆಯಿಂದಲೆ ಮುಂಗಾರು ಪೂರ್ವ ಮಳೆ ಆರಂಭವಾಗುತ್ತದೆ. ‘ಭರಣಿ ಮಳೆ ಬಿದ್ದರೆ ಧರಣಿಯಲ್ಲಾ ಬೆಳೆ’ ಎನ್ನುವ ಗಾದೆಯು ಇದೆ. ಆದರೆ ಈ ಬಾರಿ ತಾಲ್ಲೂಕಿನಲ್ಲಿ ಭರಣಿ ಮಳೆ ಬಿದ್ದಿಲ್ಲ. ಈಗ ಅಶ್ವಿನಿ ಮಳೆ ಬಿದ್ದಿದೆ. ಹೀಗಾಗಿ ಈ ಬಾರಿ ಮಳೆ, ಬೆಳೆ ಅಷ್ಟಕ್ಕಷ್ಟೆ ಎನ್ನುತ್ತಾರೆ ಹಿರಿಯ ರೈತರು.

ಮುಂಗಾರು ಪೂರ್ವ ಮಳೆ ಬರುವಾಗ ಬಿರುಗಾಳಿ ಆರ್ಭಟ, ಮಳೆಯ ರಭಸ, ಗುಡು, ಸಿಡಿಲು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಆದರೆ ಬುಧವಾರ ಸಂಜೆ ಬಿರುಗಾಳಿ ಇಲ್ಲದೆ ಮಳೆ ಬಿದ್ದಿದೆ. ಹೀಗಾಗಿ ಬೆಳೆಗಳಿಗೆ ಯಾವುದೇ ರೀತಿಯ ಹಾನಿಯಾಗಿರುವ ವರದಿಯಾಗಿಲ್ಲ.

ADVERTISEMENT

ಗುಡುಗು ಸಹಿತ ಮಳೆ
ಸೂಲಿಬೆಲೆ:
ಹೋಬಳಿ ಮತ್ತುನಂದಗುಡಿ ಹೋಬಳಿಯ ಹಲವು ಕಡೆ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಬಿರುಸು ಮಳೆ ಸುರಿಯಿತು.

ಬೆಳಿಗ್ಗೆಯಿಂದಲೇ ಮೋಡಗಳು ಕಟ್ಟಿಕೊಂಡು ಜನರಲ್ಲಿ ಮಳೆಯ ಭರವಸೆಯನ್ನು ಮೂಡಿಸಿದ್ದವು. ಬೇಸಿಗೆಯ ಧಗೆಯಿಂದ ಕಂಗೆಟ್ಟಿದ್ದ ಜನರಿಗೆ ಬುಧವಾರ ಸುರಿದಮಳೆ ಸ್ವಲ್ಪ ಮಟ್ಟಿಗೆ ತಂಪನ್ನು ನೀಡಿತು. ಸೂಲಿಬೆಲೆ ಹೋಬಳಿಯಮುತ್ಸಂದ್ರ ಸೇರಿದಂತೆ ಅನೇಕ ಕಡೆ ಹಾಗೂ ನಂದಗುಡಿಯ ಹೋಬಳಿಯಲ್ಲೂ ಗುಡುಗು ಸಹಿತ ಉತ್ತಮ ಮಳೆ ಸುರಿದು ಭೂಮಿಯನ್ನು ತಂಪಾಗಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.