ADVERTISEMENT

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:37 IST
Last Updated 5 ಜುಲೈ 2022, 4:37 IST
ದೊಡ್ಡಬಳ್ಳಾಪುರದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕಕ್ಕೆ ಆಯ್ಕೆಯಾದವರನ್ನು ಅಭಿನಂದಿಸಲಾಯಿತು
ದೊಡ್ಡಬಳ್ಳಾಪುರದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕಕ್ಕೆ ಆಯ್ಕೆಯಾದವರನ್ನು ಅಭಿನಂದಿಸಲಾಯಿತು   

ದೊಡ್ಡಬಳ್ಳಾಪುರ:ಐದು ವರ್ಷಗಳ ಅವಧಿಗೆ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಚುನಾವಣೆ ನಡೆದಿದೆ. ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘಕ್ಕೆ ಆರು‌ ಮಂದಿ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಚುನಾವಣಾಧಿಕಾರಿ ರಾಜಣ್ಣ ಅವರು ಆಯ್ಕೆಯಾದ ನಿರ್ದೇಶಕರಾದ ಹಣಬೆ ಶಾಲೆಯ ಸಿದ್ದಲಿಂಗಸ್ವಾಮಿ, ಅರಳುಮಲ್ಲಿಗೆ ಶಾಲೆಯ ಆರ್. ಶಿವಕುಮಾರ್, ಜಯಶ್ರೀ, ಚನ್ನವೀರನಹಳ್ಳಿ ಶಾಲೆಯ ಟಿ. ಅರುಣ್‌ಕುಮಾರ್, ಕನಸವಾಡಿ ಶಾಲೆಯ ಟಿ.ಕೆ. ಪ್ರಕಾಶ್, ಹುಲಿಕುಂಟೆ ಶಾಲೆಯ ಡಿ. ಮಂಜುನಾಥ್ ಅವರಿಗೆ ಪ್ರಮಾಣ ಪತ್ರ ವಿತರಿಸಿದರು.

ಪದಾಧಿಕಾರಿಗಳಾಗಿ ಆಯ್ಕೆಯಾಗಿರುವ ಶಿಕ್ಷಕರನ್ನು ರಾಜ್ಯ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಎಂ.ಎಸ್‌. ರಾಜಶೇಖರ್, ಧನಂಜಯ್, ಎ.ವಿ. ಚಂದ್ರ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್. ನರಸಿಂಹಮೂರ್ತಿ ಬರಗೂರು, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೈಕುಮಾರ್, ಕಾರ್ಯದರ್ಶಿ ಸಿ.ಕೆ. ವಸಂತಗೌಡ, ನಿರ್ದೇಶಕರಾದ ಮುತ್ತುರಾಜ ಅಭಿನಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.