ADVERTISEMENT

ತಾಲ್ಲೂಕನ್ನು ಕ್ವಾರಂಟೈನ್‌ ಬಂದಿಖಾನೆ ಮಾಡಲು ಬಿಡುವುದಿಲ್ಲ: ಆನಂದ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 3 ಮೇ 2020, 13:12 IST
Last Updated 3 ಮೇ 2020, 13:12 IST
ಬಿ.ಸಿ.ಆನಂದ್‌ಕುಮಾರ್‌
ಬಿ.ಸಿ.ಆನಂದ್‌ಕುಮಾರ್‌   

ದೊಡ್ಡಬಳ್ಳಾಪುರ: ತಾಲ್ಲೂಕನ್ನು ಬಿಬಿಎಂಪಿ ಕಸದ ತೊಟ್ಟಿಯನ್ನಾಗಿ ಮಾಡಿದ ನಂತರ ಈಗ ತಾಲ್ಲೂಕನ್ನು ಕೊರೊನಾ ಪೀಡಿತರ ಕ್ವಾರಂಟೈನ್‌ ಮಾಡುವ ಬಂದಿಖಾನೆ ಮಾಡಲು ಹೊರಟಿದ್ದಾರೆ. ಸರ್ಕಾರದ ಈ ನಿರ್ಧಾರವನ್ನು ಕೂಡಲೇ ಕೈಬಿಡಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದು ಕೆಎಂಎಫ್‌ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಅವರು ಈ ಬಗ್ಗೆ ಮಾಹಿತಿ ನೀಡಿ, ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಗೆ ಬಿಬಿಎಂಪಿ ಕಸ ತಂದು ಸುರಿಯುತ್ತಿರುವುದರಿಂದ ಈ ಭಾಗದ ಜನರ ಬದಕು ನರಕಮಯವಾಗಿದೆ. ಇದರ ವಿರುದ್ಧ ಸಾಕಷ್ಟು ಹೋರಾಟ ನಡೆಸುತ್ತಲೇ ಬರುತ್ತಿದ್ದರೂ ಕೂಡ ಕಸ ಬರುವುದು ಮಾತ್ರ ನಿಂತಿಲ್ಲ. ಇಂತಹ ಕಷ್ಟವನ್ನು ತಾಲ್ಲೂಕಿನ ಜನರು ಅನುಭವಿಸುತ್ತಿರುವಾಗಲೇ ವಿದೇಶಗಳಲ್ಲಿ ಇರುವ ರಾಜ್ಯದ ಜನರನ್ನು ಕರೆತಂದು ತಾಲ್ಲೂಕಿನ ಸಮುದಾಯ ಭವನ, ಆಸ್ಪತ್ರೆ, ಕಲ್ಯಾಣ ಮಂದಿರಗಳಲ್ಲಿ 14 ದಿನಗಳ ಕ್ವಾರಂಟೈನ್‌ ಮಾಡುತ್ತಿರುವುದು ಖಂಡನೀಯ. ತಾಲ್ಲೂಕಿನ ಜನರನ್ನು ಮಾತ್ರ ಇಲ್ಲಿ ಕ್ವಾರಂಟೈನ್‌ ಮಾಡಬೇಕು. ಇತರ ಜಿಲ್ಲೆ ಜನರನ್ನು ಅವರ ಜಿಲ್ಲೆ, ತಾಲ್ಲೂಕುಗಳಿಗೆ ಕಳುಹಿಸಿ ಅಲ್ಲಿಯೇ ಕ್ವಾರಂಟೈನ್‌ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT