ADVERTISEMENT

ಆನೇಕಲ್: ಕಸಕ್ಕೆ ಹಾಕಿದ ಬೆಂಕಿ ತಗುಲಿ ಹೊತ್ತಿ ಉರಿದ ಕಾರು!

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 15:57 IST
Last Updated 23 ಫೆಬ್ರುವರಿ 2025, 15:57 IST
ಆನೇಕಲ್ ತಾಲ್ಲೂಕಿನ ಚಂದಾಪುರದ ಕೀರ್ತಿ ಬಡಾವಣೆಯಲ್ಲಿ ಕಾರಿಗೆ ಬೆಂಕಿ ಹೊತ್ತುಕೊಂಡಿರುವುದು
ಆನೇಕಲ್ ತಾಲ್ಲೂಕಿನ ಚಂದಾಪುರದ ಕೀರ್ತಿ ಬಡಾವಣೆಯಲ್ಲಿ ಕಾರಿಗೆ ಬೆಂಕಿ ಹೊತ್ತುಕೊಂಡಿರುವುದು   

ಆನೇಕಲ್: ತಾಲ್ಲೂಕಿನ ಚಂದಾಪುರದ ಕೀರ್ತಿ ಬಡಾವಣೆಯ ಪೇಯಿಂಗ್‌ ಗೆಸ್ಟ್‌ ಬಳಿ ನಿಲ್ಲಿಸಿದ್ದ ಕಾರು ಭಾನುವಾರ ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡ ಸುಟ್ಟು ಕರಲಾಗಿದೆ.

ಚೆನ್ನೈನ ಮೋಹನ್‌ ವಿಘ್ನೇಶ್‌ ಕಾರನ್ನು ಚಂದಾಪುರದ ಸ್ನೇಹಿತನ ಪಿ.ಜಿ ಬಳಿ ನಿಲ್ಲಿಸಿ ಬೆಂಗಳೂರಿಗೆ ಹೋಗಿದ್ದರು.ಭಾನುವಾರ ನುಸುಕಿನ ಜಾವ ಇದ್ದಕ್ಕಿದ್ದಂತೆ ಕಾರಿಗೆ ಬೆಂಕಿ ಹೊತ್ತುಕೊಂಡಿದೆ.

ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದರು. ಕಾರು ನಿಲ್ಲಿಸಿದ್ದ ಸಮೀಪ ಕಸದ ರಾಶಿಗೆ ಹಾಕಿದ ಬೆಂಕಿ ಕಾರಿಗೂ ಹೊತ್ತಿಕೊಂಡಿದೆ ಎಂದು ಸ್ಥಳೀಯರು ಹೇಳಿದರು.

ADVERTISEMENT

ಚಂದಾಪುರ ಸೂರ್ಯಸಿಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.