ADVERTISEMENT

ವೀರಶೈವ ಮಹಾಸಭಾ ಅಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 8:06 IST
Last Updated 18 ಫೆಬ್ರುವರಿ 2021, 8:06 IST
ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಎಸ್‌. ಚಂದ್ರಶೇಖರ್‌ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು
ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಎಸ್‌. ಚಂದ್ರಶೇಖರ್‌ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು   

ದೊಡ್ಡಬಳ್ಳಾಪುರ:ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿ.ಎಸ್. ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಕೆ. ಮಹಾಲಿಂಗಯ್ಯ ತಿಳಿಸಿದ್ದಾರೆ.

ಮಹಾಸಭಾಕ್ಕೆ ಐದು ವರ್ಷಗಳಿಗೆ ಒಮ್ಮೆ ಚುನಾವಣೆ ನಡೆಯಲಿದೆ. ಮಹಾಸಭಾ ನಿರ್ದೇಶಕರಾಗಿ ಎಸ್‌. ಗಾಯತ್ರಿ, ಬಿ. ಗಾಯತ್ರಿ, ದಾಕ್ಷಾಯಿಣಿ ವಿಶ್ವನಾಥ್, ಮಮತಾ ಮಂಜುನಾಥ್, ಎಸ್. ಮಂಜುಳಾ, ಪಿ.ವಿ. ಸಿದ್ಧಲಿಂಗಮ್ಮ, ಕೆ.ಎಂ. ಶೋಭಾ(ಮಹಿಳಾ ವಿಭಾಗ) ಆಯ್ಕೆಯಾಗಿದ್ದಾರೆ.

ಸಾಮಾನ್ಯ ಸದಸ್ಯ ವರ್ಗದಲ್ಲಿ ಸಿ.ಎಸ್. ಶಿವಶಂಕರಪ್ಪ, ಪಿ. ಪ್ರಭಾಕರ್, ಆರ್. ಸದಾಶಿವ, ರೇವಣ್ಣ, ವಿ. ಜಿಂಕೆಬಚ್ಚಹಳ್ಳಿ, ಕೆ.ಎಸ್. ಮಹದೇವಯ್ಯ, ನಂದೀಶ್, ಬಸವರಾಜಯ್ಯ, ವೀರಭದ್ರ, ಎನ್. ಉಜ್ಜಿನಿ, ಎಸ್. ಸುರೇಶ್, ಡಿ.ಸಿ. ಮಹೇಶ್, ಸಿದ್ದರಾಮಣ್ಣ, ಪಿ.ಸಿ. ಮಂಜುನಾಥ್, ಬಿ. ಚರಣ್ ಆಯ್ಕೆಯಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.