ADVERTISEMENT

ಬೆಂ.ಗ್ರಾಮಾಂತರ : ಕೆರೆಗೆ ಉರುಳಿ ಬಿದ್ದ ಲಾರಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 7:33 IST
Last Updated 9 ನವೆಂಬರ್ 2022, 7:33 IST
ವಿಜಯಪುರದಿಂದ  ಚಿಕ್ಕಬಳ್ಳಾಪುರದ ಕಡೆಗೆ ಸಂಚರಿಸುವ ರಸ್ತೆಯಲ್ಲಿರುವ ಕೆರೆಯ ಏರಿಯ ಮೇಲೆ ಆಯತಪ್ಪಿ ಕೆರೆಗೆ ಉರುಳಿ ಬಿದ್ದಿರುವ ಸರಕು ಸಾಗಾಣಿಕೆ ಲಾರಿ
ವಿಜಯಪುರದಿಂದ  ಚಿಕ್ಕಬಳ್ಳಾಪುರದ ಕಡೆಗೆ ಸಂಚರಿಸುವ ರಸ್ತೆಯಲ್ಲಿರುವ ಕೆರೆಯ ಏರಿಯ ಮೇಲೆ ಆಯತಪ್ಪಿ ಕೆರೆಗೆ ಉರುಳಿ ಬಿದ್ದಿರುವ ಸರಕು ಸಾಗಾಣಿಕೆ ಲಾರಿ   

ವಿಜಯಪುರ (ಬೆಂ.ಗ್ರಾಮಾಂತರ):ಪಟ್ಟಣದಿಂದ ಚಿಕ್ಕಬಳ್ಳಾಪುರದ ಕಡೆಗೆ ಸಂಚರಿಸುವ ಮುಖ್ಯರಸ್ತೆಯಲ್ಲಿರುವ ಕೆರೆ ಏರಿಯ ಮೇಲಿನ ತಿರುವಿನಲ್ಲಿ ಸರಕು ಸಾಗಾಣಿಕೆ ಲಾರಿಯೊಂದು ಸೋಮವಾರ ರಾತ್ರಿ ಆಯತಪ್ಪಿ ಕೆರೆಗೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಲಾರಿ ಚಾಲಕ ಮತ್ತೊಂದು ಬದಿಯ ಬಾಗಿಲಿನಿಂದ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಜಯಪುರದ ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ ಹೊರಟಿದ್ದ ಲಾರಿಯು ತಿರುವಿನಲ್ಲಿ ಎಡಭಾಗಕ್ಕೆ ಬಂದಿರುವ ಕಾರಣ ಕೆರೆಗೆ ಉರುಳಿ ಬಿದ್ದಿದೆ. ತಡೆಗೋಡೆ ಇದ್ದಿದ್ದರೆ ಲಾರಿ ಉರುಳಿ ಬೀಳುತ್ತಿರಲಿಲ್ಲ. ಚಿಕ್ಕಬಳ್ಳಾಪುರದ ಕಡೆಗೆ ಸಂಚರಿಸುವ ಮುಖ್ಯರಸ್ತೆ ಇದಾಗಿದೆ. ಬಹುತೇಕ ಸರಕು ಸಾಗಾಣಿಕೆ ವಾಹನಗಳು ಇದೇ ರಸ್ತೆಯಲ್ಲಿಯೇ ಸಂಚರಿಸುತ್ತವೆ. ಈ ರಸ್ತೆ ಅಭಿವೃದ್ಧಿ ಕಡೆಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲ ಎಂಬುದು ಜನರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT