ADVERTISEMENT

ಬಾಂಗ್ಲಾದೇಶ ಮೂವರು ಮಹಿಳೆಯರು ಕಾಣೆ

​ಪ್ರಜಾವಾಣಿ ವಾರ್ತೆ
Published 3 ಮೇ 2024, 13:33 IST
Last Updated 3 ಮೇ 2024, 13:33 IST

ವಿಜಯಪುರ (ದೇವನಹಳ್ಳಿ): ಹೋಬಳಿಯಲ್ಲಿರುವ ಸರ್ವೊದಯಾ ಸರ್ವಿಸ್ ಸೊಸೈಟಿಯಲ್ಲಿ ಕಳೆದ ಒಂಭತ್ತು ತಿಂಗಳಿಂದ ರಕ್ಷಣೆಯಲ್ಲಿದ್ದ ಬಾಂಗ್ಲಾದೇಶದ ಮೂವರು ಮಹಿಳೆಯರು ಕಾಣೆಯಾಗಿದ್ದಾರೆ.

ಈ ಸಂಬಂಧ ಸೊಸೈಟಿಯಲ್ಲಿ ಉಜ್ವಲ ಯೋಜನಾ ನಿರ್ದೇಶಕಿ ರೇವತಿ ವಿಜಯಪುರ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಪ್ರಾದೇಶಿಕ ನೋಂದಣಿ ಕಚೇರಿಯ ಶಿಫಾರಸ್ಸಿನಂತೆ ಬಾಂಗ್ಲಾದೇಶದ ಬಾನುಪ್ರಿಯಾ, ನಸ್ರುತ್ ಜಹಾನ್, ರೂಬಿನಾ ಅಕ್ತರ್, ಪಿಂಕಿ ಮತ್ತು ರೂಪಾ ಅಕ್ತು ಅವರು ತಾತ್ಕಾಲಿಕವಾಗಿ ಸೊಸೈಟಿಯಲ್ಲಿ ರಕ್ಷಣೆ ಪಡೆದಿದ್ದರು.

ADVERTISEMENT

ಏಪ್ರಿಲ್‌ 27ರಂದು ತಮಗೆ ವೈಯಕ್ತಿಕವಾಗಿ ಕೆಲ ಅಗತ್ಯ ವಸ್ತು ಖರೀದಿಸಬೇಕು. ವಿಜಯಪುರಕ್ಕೆ ಕರೆದುಕೊಂಡು ಹೋಗುವಂತೆ ಮನವಿ  ಮಾಡಿದ್ದರು. ಅದರಂತೆ ಐವರನ್ನು ವಿಜಯಪುರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ರೂಬಿನಾ ಅಕ್ತರ್, ಪಿಂಕಿ ಮತ್ತು ರೂಪಾ ಅಕ್ತು ಅವರು ಕಾಣೆಯಾಗಿದ್ದಾರೆ. ಎಲ್ಲಾ ಕಡೆ ಹುಡುಕಿದರೂ ಸಿ‌ಕ್ಕಿಲ್ಲ. ಸೊಸೈಟಿಯಲ್ಲೂ ಕಾಣುತ್ತಿಲ್ಲ ಎಂದು ರೇವತಿ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.