ADVERTISEMENT

ಆನೇಕಲ್‌ ‌| ಟಿಪ್ಪರ್‌ ಲಾರಿ ಹರಿದು ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 20 ಜೂನ್ 2023, 6:25 IST
Last Updated 20 ಜೂನ್ 2023, 6:25 IST
ಪದ್ಮಾವತಿ(56)
ಪದ್ಮಾವತಿ(56)   

ಆನೇಕಲ್:  ತಾಲ್ಲೂಕಿನ ದೊಮ್ಮಸಂದ್ರದಲ್ಲಿ ಟಿಪ್ಪರ್‌ ಲಾರಿ ಹರಿದು ಮಹಿಳೆಯೊಬ್ಬರು ಮೃತಪಟ್ಟಿದ್ದು, ಇವರ ಪತಿ ಮತ್ತು ಮೊಮ್ಮಕಳು ಸೇರಿ ಮೂವರಿಗೆ ಗಾಯವಾಗಿದೆ.

ದೊಮ್ಮಸಂದ್ರದ ಪದ್ಮಾವತಿ(56) ಮೃತ ಮಹಿಳೆ.

ಪದ್ಮಾವತಿ ಮೊಮ್ಮಕ್ಕಳಿಗೆ ಶಾಲಾ ಬ್ಯಾಗ್‌ ತರಲು ಪತಿ ಮುರುಗನ್‌ ಜತೆ ಇಬ್ಬರು ಮೊಮ್ಮಕ್ಕಳಾದ ನಿತಿನ್‌ ಮತ್ತು ದರ್ಶನ್‌ ಅವರೊಂದಿಗೆ  ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಹಿಂಬದಿಯಿಂದ ಬಂತ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ADVERTISEMENT

ಕೆಳಗೆ ಬಿದ್ದ ಪದ್ಮಾವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮುರುಗನ್‌ಗೆ ಗಂಭೀರ ಗಾಯವಾಗಿದೆ. ಮೊಮ್ಮಕ್ಕಳಾದ ನಿತಿನ್‌ ಮತ್ತು ದರ್ಶನ್‌ ಗಾಯಗೊಂಡಿದ್ದು ಗಾಯಗೊಂಡಿರುವ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಘಿದೆ ಎಂದು ಸರ್ಜಾಪುರ ಪೊಲೀಸರು ತಿಳಿಸಿದ್ದಾರೆ.

ಟಿಪ್ಪರ್‌ ಲಾರಿ ಚಾಲಕನ ಅಜಾಗಾರುಕತೆಯಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದರು. ಟಿಪ್ಪರ್‌ ಚಾಲಕ ಮತ್ತು ಮಾಲೀಕನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.