ಬೆಳಗಾವಿ: ಕಾವಿಧಾರಿಯೊಬ್ಬ ಬೆಳಗಿನ ಸಮಯದಲ್ಲಿಯೇ ಬಾರ್ಗೆ ಹೋಗಿ ಮದ್ಯ ಸೇವಿಸಿ, ಎಗ್ಬಿರಿಯಾನಿ ಸವಿದ ಘಟನೆ ಗುರುವಾರ ನಗರದಲ್ಲಿ ಚರ್ಚೆಗೆ ಗ್ರಾಸವಾಯಿತು.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶಿಶುನಾಳದ ಸ್ವಾಮೀಜಿ ಎಂದು ಹೇಳಿಕೊಂಡ ಮೃತ್ಯುಂಜಯ ಹಿರೇಮಠ ಎಂಬುವರು ಕಾವಿ ಧರಿಸಿ ಮದ್ಯ ಸೇವಿಸಿದವರು. ಬಾರ್ನಿಂದ ಕಾವಿ ಧಾರಿಯು ಹೊರಗೆ ಬರುತ್ತಿರು ವುದನ್ನು ರಸ್ತೆಯ ಲಿ ಹೊರಟಿದ್ದ ಜನರು ಬೆರಗಾಗಿ ನೋಡಿದರು.
`ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳ ಕಚೇರಿಯಲ್ಲಿ ಕೆಲಸ ಇತ್ತು. ಅದಕ್ಕಾಗಿ ಬೆಳಿಗ್ಗೆ ಬಂದಿದ್ದೆ. ಕೆಲಸ ಮುಗಿತು, ಬಿಯರ್ ಕುಡಿದು, ಎಗ್ ಬಿರಿಯಾನಿ ಊಟ ಮಾಡಿದೆ. ಇದರಲ್ಲಿ ತಪ್ಪೇನಿದೆ. ನಾವೇನು ಬಾರ್ಗೆ ಬರಬಾರದೆ, ಕೆಲ ವರು ಕದ್ದು-ಮುಚ್ಚಿ ಕುಡಿಯುತ್ತಾರೆ~ ಎಂದು ಹಿರೇಮಠ ಸಮರ್ಥಿಸಿ ಕೊಂಡರು.
ಮುಂಗಾರು ಮಳೆಯಾಗಿಲ್ಲ. ಕಳೆದ ವರ್ಷದಿಂದ ಸರಿಯಾದ ಮಳೆ- ಬೆಳೆ ಇಲ್ಲ. ಇದಕ್ಕಾಗಿ ಪ್ರಾರ್ಥಿಸಿ ಕುಡಿದಿರು ವುದಾಗಿ ಹೇಳಿ, ಒಂದು ಬಿಯರ್ ಹಾಗೂ ಎಗ್ಬಿರಿಯಾನಿ ಸೇವಿಸಿ ಮರಳಿ ತಮ್ಮೂರಿಗೆ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.