ADVERTISEMENT

ಮದ್ಯದ ಅಂಗಡಿ ತೆರವುಗೊಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 5:46 IST
Last Updated 12 ಅಕ್ಟೋಬರ್ 2017, 5:46 IST

ಮುಗಳಖೋಡ:  ಪಟ್ಟಣದೊಳಗಿನ ಮದ್ಯದ ಅಂಗಡಿಗಳನ್ನು ತೆರವುಗೊಳಿಸಿ, ಅರ್ಧ ಕಿಲೊಮೀಟರ್‌ ದೂರದಲ್ಲಿ ಆರಂಭಿಸುವಂತೆ ಮಾಡಬೇಕು ಎಂದು ಕರ್ನಾಟಕ ನವ ನಿರ್ಮಾಣ ಪಡೆಯ ಕಾರ್ಯಕರ್ತರು ಒತ್ತಾಯಿಸಿದರು.

ರಾಯಬಾಗ ಅಬಕಾರಿ ಇಲಾಖೆ ಸಿಪಿಐ ಮಲ್ಲನಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಅನೇಕ ಸಲ ಮನವಿ ಮಾಡಿದರೂ ಪಟ್ಟಣದೊಳಗಿನ ಮದ್ಯದ ಅಂಗಡಿಗಳನ್ನು ತೆರವುಗೊಳಿಸಿಲ್ಲ, ಈಗಲಾದರೂ ಗ್ರಾಮಸ್ಥರ ಬೇಡಿಕೆ ಮನ್ನಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಅಧ್ಯಕ್ಷ ರಾಜಶೇಖರ ಶೇಗುಣಸಿ, ತಾಲ್ಲೂಕು ಘಟಕದ ಅಧ್ಯಕ್ಷ ಅರುಣ ಠಕ್ಕನ್ನವರ, ಅನೀಲ ಗೋಕಾಕ, ಶಂಕರ ಶೇಗುಣಸಿ, ಮುದಕಪ್ಪ ಶೇಗುಣಶಿ, ರಾಮಣ್ಣ ಶೇಗುಣಸಿ, ದೀಪಕ ತುಗದಲಿ, ದತ್ತು ಶೇಗುಣಸಿ, ಸಿದ್ರಾಮ ಶೇಗುಣಸಿ, ಗಣಪತಿ ಶೇಗುಣಸಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.