ADVERTISEMENT

ಕೆರೆಯಲ್ಲಿ ಮುಳುಗಿ 4 ವಿದ್ಯಾರ್ಥಿಗಳ ಸಾವು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 19:46 IST
Last Updated 21 ನವೆಂಬರ್ 2018, 19:46 IST

ಬೆಳಗಾವಿ: ಇಲ್ಲಿಗೆ ಸಮೀಪದ ಸಾವಗಾಂವ್‌ ಕೆರೆಯಲ್ಲಿ ಬುಧವಾರ ನಾಲ್ಕು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ. ನಗರದ ನಿವಾಸಿಗಳಾದ ಸಾಹಿಲ್‌ ಯುವರಾಜ ಬೆನಕೆ (15), ಅಮನ್‌ ಸಿಂಗ್‌ (14), ಚೇತನ ಬಾಂದುರ್ಗೆ (16) ಹಾಗೂ ಗೌತಮ ಕಲಘಟಗಿ (15) ಮೃತರಾಗಿದ್ದಾರೆ.

ವಿದ್ಯಾರ್ಥಿಗಳು ಮಧ್ಯಾಹ್ನ ಕೆರೆ ಬಳಿ ಬಂದಿದ್ದರು. ಬಟ್ಟೆಗಳು ಹಾಗೂ ಮೊಬೈಲ್‌ಗಳನ್ನು ಬೈಕ್‌ ಮೇಲಿಟ್ಟು, ಈಜಲು ಕೆರೆಯಲ್ಲಿ ಇಳಿದಾಗ ದುರ್ಘಟನೆ ಸಂಭವಿಸಿದೆ. ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ದೂರವಾಣಿ ಕರೆ ಮಾಡಿ, ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಇಳಿದು, ಶವಗಳನ್ನು ಹೊರತೆಗೆದಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT