ADVERTISEMENT

ಅಥಣಿ | ದೀರ್ಘದಂಡ ನಮಸ್ಕಾರ ಹಾಕುವಾಗ ಕಾರು ಹರಿದು ಯುವತಿ ಸಾವು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 22:44 IST
Last Updated 23 ಮಾರ್ಚ್ 2023, 22:44 IST
ಐಶ್ವರ್ಯ ನಾಯಿಕ
ಐಶ್ವರ್ಯ ನಾಯಿಕ   

ಅಥಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ತೀರ್ಥ ಗ್ರಾಮದಲ್ಲಿ ಗುರುವಾರ ದೀರ್ಘದಂಡ ನಮಸ್ಕಾರ ಹಾಕುವ ವೇಳೆ, ತಲೆಯ ಮೇಲೆ ಕಾರು ಹರಿದು ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ತೀರ್ಥ ಗ್ರಾಮದ ಐಶ್ವರ್ಯ ನಾಯಿಕ (23) ಮೃತರು.

ಗ್ರಾಮದೇವ ಜಾತ್ರೆಯ ಅಂಗವಾಗಿ ಹರಕೆ ಹೊತ್ತಿದ್ದ ಅವರು ದೀರ್ಘದಂಡ ನಮಸ್ಕಾರ ಹಾಕುತ್ತಿದ್ದರು. ಕೃಷ್ಣಾ ನದಿಯಿಂದ ದೇವಸ್ಥಾನವರಿಗೆ ನಮಸ್ಕಾರ ಹಾಕುತ್ತ ಬರುವಾಗ ವೇಗವಾಗಿ ಬಂದ ಕಾರು ಯುವತಿಯ ತಲೆ ಮೇಲೆ ಹರಿಯಿತು. ಕಾರ್‌ ಚಾಲಕ ಪರಾರಿಯಾಗಿದ್ದಾನೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.