ADVERTISEMENT

ರಾಯಬಾಗ: ‘ಜೈಶ್ರೀರಾಮ್’ ಎನ್ನುವಂತೆ ಒತ್ತಾಯ ಹೇರಿ, ಕಪಾಳಕ್ಕೆ ಏಟು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 16:16 IST
Last Updated 7 ಅಕ್ಟೋಬರ್ 2021, 16:16 IST

ಬೆಳಗಾವಿ: ಶ್ರೀರಾಮ ಸೇನೆ ಹಾಗೂ ಬಜರಂಗ ದಳದವರು ಎನ್ನಲಾದ ಯುವಕರ ಗುಂಪೊಂದು, ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ‘ಜೈಶ್ರೀರಾಮ್’ ಎಂದು ಹೇಳಿಸಿದ ಘಟನೆ ಜಿಲ್ಲೆಯ ರಾಯಬಾಗದ ರೋಹಿದಾಸ ಗಲ್ಲಿಯಲ್ಲಿ ನಡೆದಿದೆ.

ಅಭಿಷೇಕ್ ಕದಂ ಎನ್ನುವವರು ಹಲ್ಲೆಗೊಳಗಾದವರು.

‘ಜೈಶ್ರೀರಾಮ್’ ಎನ್ನುವಂತೆ ಒತ್ತಾಯ ಹೇರಿ, ಕಪಾಳಕ್ಕೆ ಹೊಡೆದಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ADVERTISEMENT

ಹಲ್ಲೆಗೊಳಗಾದ ವ್ಯಕ್ತಿಯು, ‘ಇನ್ಮುಂದೆ ಹಿಂದೂ ಧರ್ಮಕ್ಕೆ ಅಥವಾ ಹಿಂದೂ ಸಂಘಟನೆಯವರಿಗೆ ಬೈಯುವುದಿಲ್ಲ. ನನ್ನಿಂದ ತಪ್ಪಾಗಿದೆ’ ಎಂದು ಹೇಳಿರುವುದು ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.