ADVERTISEMENT

30 ಸಾವಿರ ಸಸಿ ನೆಡುವ ಕಾರ್ಯ ನಾಳೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 12:06 IST
Last Updated 4 ಜೂನ್ 2020, 12:06 IST
ತೆಲಸಂಗದಲ್ಲಿ ಸಸಿ ನೆಡಲು ಉದ್ದೇಶಿಸಿರುವ ಸ್ಥಳವನ್ನು ತಾಲ್ಲೂಕು ಪಂಚಾಯಿತಿ ಇಒ ರವಿಬಂಗಾರೆಪ್ಪನವರ ವೀಕ್ಷಿಸಿದರು
ತೆಲಸಂಗದಲ್ಲಿ ಸಸಿ ನೆಡಲು ಉದ್ದೇಶಿಸಿರುವ ಸ್ಥಳವನ್ನು ತಾಲ್ಲೂಕು ಪಂಚಾಯಿತಿ ಇಒ ರವಿಬಂಗಾರೆಪ್ಪನವರ ವೀಕ್ಷಿಸಿದರು   

ತೆಲಸಂಗ: ‘ವಿಶ್ವ ಪರಿಸರ ದಿನದ ಅಂಗವಾಗಿ ಅಥಣಿ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಸಹಕಾರದೊಂದಿಗೆ ಜೂನ್‌ 5ರಂದು 105 ಗ್ರಾಮ ಪಂಚಾಯಿತಿಗಳ ಮೂಲಕ 30ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ರವಿ ಬಂಗಾರೆಪ್ಪನವರ ತಿಳಿಸಿದರು.

ಗ್ರಾಮದಲ್ಲಿ ಸಸಿ ನೆಡಲು ಗುರುತಿಸಿರುವ ಸ್ಥಳಗಳನ್ನು ಗುರುವಾರ ವೀಕ್ಷಿಸಿ ಅವರು ಮಾತನಾಡಿದರು.

‘ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳು ಕಾರ್ಯಕ್ರಮ ನಡೆಸಿ, ಪರಿಸರ ಜಾಗೃತಿ ಮೂಡಿಸುವುದು ಮತ್ತು ಹೆಚ್ಚೆಚ್ಚು ಸಸಿ ನೆಡುವ ಕಾರ್ಯಕ್ಕೆ ಒತ್ತು ಕೊಡುವುದು ಕಡ್ಡಾಯವಾಗಿದೆ. ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳಬೇಕು. ಮುಂಜಾಗ್ರತೆ ವಹಿಸಬೇಕು’ ಎಂದರು.

ADVERTISEMENT

ವೈದ್ಯಾಧಿಕಾರಿ ಡಾ.ವಾಸಂತಿ, ಪಿಡಿಒ ಬೀರಪ್ಪ ಕಡಗಂಚಿ, ವಿನೋದ ಪಾಟೀಲ, ಸಂಗಮೇಶ ಕುಮಠಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.