ADVERTISEMENT

ಕಾವ್ಯ ಪ್ರಶಸ್ತಿಗೆ ಜಿನದತ್ತ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 16:11 IST
Last Updated 23 ನವೆಂಬರ್ 2020, 16:11 IST
ಜಿನದತ್ತ ದೇಸಾಯಿ
ಜಿನದತ್ತ ದೇಸಾಯಿ   

ಬೆಳಗಾವಿ: ವಿಜಯಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನದಿಂದ ಕೊಡಮಾಡುವ 2019ನೇ ಸಾಲಿನ ಕಾವ್ಯ ಪ್ರಶಸ್ತಿಗೆ ಇಲ್ಲಿನ ಕವಿ ಡಾ.ಜಿನದತ್ತ ದೇಸಾಯಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ₹ 51ಸಾವಿರ ಹಾಗೂ ಫಲಕ ಒಳಗೊಂಡಿದೆ.

ಧಾರವಾಡದಲ್ಲಿ ಸಾಹಿತಿ ಡಾ.ಜಿ.ಎಂ. ಹೆಗಡೆ ಅವರ ಅಧ್ಯಕ್ಷತೆಯ ಸಮಿತಿಯು ಈ ಆಯ್ಕೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ದೇಸಾಯಿ ಅವರನ್ನು ಸಾಹಿತಿಗಳಾದ ಪ್ರೊ.ಬಸವರಾಜ ಜಗಜಂಪಿ, ಪ್ರೊ.ಎಂ.ಎಸ್. ಇಂಚಲ, ಆರ್.ಬಿ. ಕಟ್ಟಿ, ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಪದಾಧಿಕಾರಿಗಳಾದ ಎಲ್.ಎಸ್. ಶಾಸ್ತ್ರಿ, ಪಿ.ಬಿ. ಸ್ವಾಮಿ, ಅಶೋಕ ಮಳಗಲಿ, ಎಂ.ಎ. ಪಾಟೀಲ, ಹಾಸ್ಯಕೂಟದ ಗುಂಡೇನಟ್ಟಿ ಮಧುಕರ, ಪ್ರೊ.ಜಿ.ಕೆ. ಕುಲಕರ್ಣಿ, ಅರವಿಂದ ಹುನಗುಂದ, ಜಿ.ಎಸ್. ಸೋನಾರ, ಎಂ.ಬಿ. ಹೊಸಳ್ಳಿ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.