ADVERTISEMENT

ಸಾವಳಗಿ: ಘಟಪ್ರಭೆಗೆ ಬಾಗಿನ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 10:51 IST
Last Updated 10 ಆಗಸ್ಟ್ 2021, 10:51 IST
ಸಾವಳಗಿ ಗ್ರಾಮದಲ್ಲಿ ಘಟಪ್ರಭಾ ನದಿಗೆ ಕಾರ್ಮಿಕ ಮುಖಂಡ ಹಾಗೂ ಮುಖಂಡರು ಬಾಗಿನ ಅರ್ಪಿಸಿದರು
ಸಾವಳಗಿ ಗ್ರಾಮದಲ್ಲಿ ಘಟಪ್ರಭಾ ನದಿಗೆ ಕಾರ್ಮಿಕ ಮುಖಂಡ ಹಾಗೂ ಮುಖಂಡರು ಬಾಗಿನ ಅರ್ಪಿಸಿದರು   

ಸಾವಳಗಿ: ಗೋಕಾಕ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಘಟಪ್ರಭಾ ನದಿಗೆ ಮುಖಂಡರು, ಮಹಿಳೆಯರು, ಮಕ್ಕಳು ಮತ್ತು ಹಿರಿಯರು ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.

‘ನಾಡಿನ ಸಮೃದ್ಧಿಗಾಗಿ ಹಿಂದಿನ ಕಾಲದಿಂದಲೂ ಗಂಗಾಮಾತೆಗೆ ಪೂಜೆ ಸಲ್ಲಿಸಲಾಗುತ್ತದೆ. ನಾಡಿನಲ್ಲಿ ಮಳೆ–ಬೆಳೆ ಚೆನ್ನಾಗಿ ಬರಲೆಂದು ಬೇಡಿಕೊಳ್ಳುತ್ತಾರೆ. ಸಮೃದ್ಧಿ ಇರಲೆಂದು ಪ್ರಾರ್ಥಿಸುತ್ತಾರೆ’ ಎಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಿ ಕರಿಗಾರ, ಪಿಡಿಒ ಎಂ.ಸರಕಾವಸ್, ಮುಖಂಡರಾದ ಶಿವಮೂರ್ತಿ ನಾಯಿಕ, ಭೀಮ ಮಕ್ಕಳಗೇರಿ, ಮಹಾಂತೇಶ ಜೇಡರ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ, ಸದಸ್ಯರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.