ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಕುಲವಳ್ಳಿ ಗುಡ್ಡದ ಒಂಬತ್ತು ಹಳ್ಳಿಗಳ ಜಮೀನುಗಳಲ್ಲಿ ಸಾಗುವಳಿ ಮಾಡುತ್ತ ಬಂದಿರುವ ರೈತರ ಬೇಡಿಕೆಗಳಿಗೆ ಆಗ್ರಹಿಸಿ ಈಚೆಗೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ 12 ರೈತರಿಗೆ ಇಲ್ಲಿಯ ಕಿರಿಯ ದಿವಾಣಿ ಮತ್ತು ಸತ್ರ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.
ಹಬೀಬ ಶಿಲೇದಾರ, ಬಿಷ್ಟಪ್ಪ ಶಿಂದೆ, ಅರ್ಜನ್ ಮಡಿವಾಳರ, ನಾಗಪ್ಪ ಅಸಲನ್ನವರ, ಮಹಾಂತಯ್ಯ ವಕ್ಕುಂದಮಠ, ನತ್ತು ಪಾರೀಸ್, ಕಾಸೀಂಸಾಬ ನೇಸರಗಿ, ಮಹಾಂತೇಶ ಎಮ್ಮಿ, ಗಿರಿಮಲ್ಲಯ್ಯ ನಾಯ್ಕರ್, ಸಲೀಂ ಮೊಕಾಶಿ, ರಾಜೀವ ದೊಡ್ಡನಾಯ್ಕರ್, ಪಿ. ಕೆ. ನೀರಲಕಟ್ಟಿ ಅವರ ಮೇಲೆ ಕಿತ್ತೂರು ಪೊಲೀಸರು ವಿವಿಧ ಕಲಂ ಅಡಿ ಪ್ರಕರಣ ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.